Tag Archives: ಬ್ಲಾಗ್ಸ್

ಬ್ಲಾಗ್ ಬೀಟ್ 11

16 ಜುಲೈ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.………………………………………………………………

ಪಂಚ್ ಲೈನ್

‘ಪುತ್ರ’ಕರ್ತರಾಗಿಯೂ, ‘ಪತ್ರ’ಕರ್ತರಾಗಿಯೂ ಖ್ಯಾತರಾದ, ರಾಜಕೀಯ ಮೇಧಾವಿ ಎಂದು ಕುಖ್ಯಾತರಾಗಿರುವ ಶ್ರೀಯುತ ದೇವೇಗೌಡರು ಆತ್ಮಕತೆಯನ್ನು ಬರೆದರೆ ಅದಕ್ಕೆ ಹೆಸರನ್ನೇನಿಡಬಹುದು ಎಂದು ಕೇಳುತ್ತಾರೆ ಪಂಚ್ ಲೈನ್ ಗಣೇಶ್.

ಪ್ರಕಾಶ್ ಶೆಟ್ಟಿ ಪಂಚ್

ರಾಜ್ಯದ ಕುದುರೆ ವ್ಯಾಪಾರ, ಕೇಂದ್ರದ ಕೋಣದ ವ್ಯಾಪಾರ, ಪಾಕಿಸ್ತಾನದ ಅವಾಂತರ ಎಲ್ಲವೂ ಶೆಟ್ಟಿಯವರ ಕುಂಚದ ಪಂಚಿನಲ್ಲಿ ಅರಳಿರುವ ಮೋಡಿಯನ್ನು ಓದೇ ಸವಿಯಬೇಕು…

ಬೊಗಳೆ

ಮಿತ್ರರೊಂದಿಗೆ ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದವರಲ್ಲಿ ಒಬ್ಬ ವ್ಯಕ್ತಿ ದಿಢೀರನೇ ಸಂಸಾರ ಸಾಗರಕ್ಕೆ ಧುಮುಕಿದ ಆತಂಕಕಾರಿ ಘಟನೆಯೊಂದನ್ನು ಬೊಗಳೆ ವರದಿ ಮಾಡಿದೆ.
ಕೇಂದ್ರದಲ್ಲಿ some- ಸದರ ಸೆಳೆಯಲು, ಗಾಳ ಹಾಕಲು ಗಣಿ ಧೂಳಿನ ಧಣಿಗಳಿಗೆ ಬೇಡಿಕೆ ಬಂದಿರುವುದನ್ನು ಬೊಗಳಿದ್ದಾರೆ. ಈ ಮಧ್ಯೆ ಅಸತ್ಯ ಅನ್ವೇಶಿಗಳು ‘ಬ್ಲಾಗ್’ ಎಂಬ ಆಂಗ್ಲಪದಕ್ಕೆ ಕನ್ನಡದ ಪದವನ್ನು ಸೂಚಿಸಿ ಎಂದು ಅನ್ವೇಷಣೆಗೆ ತೊಡಗಿದ್ದಾರೆ. ಬೊಗಳೆ ಎಂಬುದೇ ಸೂಕ್ತವಾದದ್ದು ಎಂಬುದು ಸಾಮ್ರಾಟರ ಅಭಿಪ್ರಾಯ.

ಸುದ್ದಿ ಕ್ಯಾತ

ಕ್ಯಾತೆ ತೆಗೆಯಲು ಸುದ್ದಿಯನ್ನು ಹುಡುಕಿಕೊಂಡು ಹೊರಟ ಕ್ಯಾತ ಜಗತ್ತಿನ ವಿವಿಧ ದೇಶಗಳ ಜನರು ಸ್ನಾನ ಹೇಗೆ ಮಾಡುತ್ತಾರೆ ಎಂಬ ಬಗ್ಗೆ ‘ಸ್ನಾನ ಮಾಡುವವರು’ ನಡೆಸಿರುವ ಅಧ್ಯಯನವನ್ನು ವರದಿ ಮಾಡಿದ್ದಾನೆ.
ಬ್ರಿಟೀಷರು ‘ಕೊಳಕಾಗಿ’ ಸ್ನಾನ ಮಾಡಿ ಸ್ವಚ್ಛವಾಗುತ್ತಾರಂತೆ. ಭಾರತೀಯರಂತೂ ಸ್ನಾನದ ಗೋಜಿಗೇ ಹೋಗುವುದಿಲ್ಲ. ವರದಿ ಓದಿ..

ಬ್ಲಾಗ್ ಬೀಟ್ 10

2 ಜುಲೈ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

………………………………………………………………

ಬೊಗಳೆ ರಗಳೆ

ತಮ್ಮನ್ನು ಉಚ್ಛಾಟಿಸಿದ ಪಕ್ಷ ಯಾವುದು ಎಂಬುದೇ ತಿಳಿಯದೆ ಅಪಾರ ಗೊಂದಲದಲ್ಲಿರುವ ಸಿಂಧ್ಯಾರವರನ್ನು ಖಾಸಗಿಯಾಗಿ ಸಂದರ್ಶನ ಗೈದ ಬೊಗಳೆ ರಗಳೆ ವರದ್ದಿಗಾರ ಸಿಂಧ್ಯಾರವರು ಆ ವರದ್ದಿಗಾರ ನಗೆ ನಗಾರಿಗೆ ಹಾರಬಹುದು ಎಂದು ಹೇಳುತ್ತಿದ್ದಂತೆಯೇ ಸಂದರ್ಶನವನ್ನು ಅರ್ಧಕ್ಕೆ ನಿಲ್ಲಿಸಿ ಓಡಿದ್ದು ನಗೆ ಸಾಮ್ರಾಟರ ಗಮನಕ್ಕೆ ಬಂದಿದೆ. ವರದ್ದಿಗಾರನಿಗೆ ಗಾಳ ಹಾಕುವುದು ಹೇಗೆ ಎಂಬ ಬಗ್ಗೆ ಸಾಮ್ರಾಟರು ಬಳ್ಳಾರಿಯ ಫಾರ್ಮುಲಾದ ಬಗ್ಗೆ ಆಲೋಚಿಸುತ್ತಿದ್ದಾರೆ.

ಪಂಚ್ ಲೈನ್

ಯಡ್ಯೂರಪ್ಪ ಯಾಕೆ ಯಾವಾಗಲೂ ಹಣೆಗೆ (ಇನ್ನೆಲ್ಲಿಗೆ ಇಟ್ಟುಕೊಳ್ಳಲು ಸಾಧ್ಯ?!) ಕುಂಕುಮ ಹಚ್ಚಿಕೊಂಡು ಓಡಾಡುತ್ತಾರೆ ಎಂದು ಪಂಚ್ ಕೊಟ್ಟಿದ್ದಾರೆ ಪಂಚ್ ಲೈನ್ ಗಣೇಶ್. ಹಾಗೆಯೇ ಯಡ್ಯೂರಪ್ಪನವರ ಅಯೋಗ್ಯತೆಯನ್ನು ಪತ್ತೆ ಹಚ್ಚಿರುವ ದೇವೇಗೌಡರು ಏನಂತ ಉಲಿದಿದ್ದಾರೆ ಎನ್ನುವ ಘನ ಘೋರ ಗಂಭೀರ ಸಂಗತಿಯನ್ನು ಮಷ್ಕಿರಿಯಲ್ಲೇ ಪಂಚಿಸಿದ್ದಾರೆ.

ಕಾಲಚಕ್ರ

ಪದ್ಮಪ್ರಿಯ ಪ್ರಕರಣದ ಬಗ್ಗೆ ಬ್ಲಾಗ್ ಬೀಟಿನಲ್ಲಿ ಯಾವುದೂ ಬೀಟಾಗಲಿಲ್ಲವಲ್ಲ ಎಂದು ಪೇಚಾಡುತ್ತಿದ್ದ ಸಾಮ್ರಾಟರಿಗೆ ‘ಕಾಲಚಕ್ರ’ವೇ ಸಮಾಧಾನ ನೀಡಿತು. ‘ಲೇ, ಯಾವನಿಗ್ ಹೇಳ್ತಿ…ಈ ವಯ್ಯಾ ಅದ್ಯಾರ್ನೋ ಇಟ್‌ಕಂಡಿದ್ನಲಾ ಅದು ತಪ್ಪಲ್ವಾ, ಈ ಹಾಳ್ ಸಮಾಜಕ್ಕೆ ಬರೀ ಹೆಂಗುಸ್ರುದ್ದೇ ಕಾಣ್ಸುತ್ತೇ’ ಎಂದು ಹೇಳುತ್ತಾ ಕೈ ನಟಿಕೆ ಮುರಿದ ತಿಮ್ಮಕ್ಕನನ್ನು ಕಂಡು ಸಾಮ್ರಾಟರು ಕೈಮುಗಿದು ಬಂದರು.

ಕೆಂಡಸಂಪಿಗೆಯ  ಸುದ್ದಿ ಕ್ಯಾತ

ಸರ್ಕಸ್ಸಿನ ಟೆಂಟಿನಿಂದ ತನ್ನ ಸಹೋದ್ಯೋಗಿಗಳು ಪರಾರಿಯಾಗಲು ನೆರವು ನೀಡಿದ ಜಿರಾಫೆಯನ್ನು ಪೋಲೀಸರು ಬಂಧಿಸಿರುವ ಸಂಗತಿಯನ್ನು ವರದಿ ಮಾಡಿದ್ದಾನೆ ಸುದ್ದಿಕ್ಯಾತ. ಜಿರಾಫೆಯನ್ನು ಬಂಧಿಸಿರುವ ಪೊಲೀಸರು ಏಣಿ ಹಾಕಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾನೆ ಸುದ್ದಿ ಕ್ಯಾತ. ಪ್ರಾಣಿ ದಯಾ ಸಂಘದ ಮನೇಕಾ ಗಾಂಧಿ ನಾಯಿ ಕೇಸಿನಲ್ಲಿ ಬ್ಯುಸಿ ಇದ್ದು ಜಿರಾಫೆಯನ್ನು ನೋಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಕ್ಯಾತೆಯನ್ನು ತೆಗೆಯಲು ಸುದ್ದಿ ಕ್ಯಾತ ಮರೆತಂತಿದೆ!

ಬ್ಲಾಗ್ ಬೀಟ್ 9

17 ಜೂನ್

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

………………………………………………………………

ಬೊಗಳೆ ರಗಳೆ

ಇಂಧನ ಬೆಲೆಯೇರಿಕೆಯ ವಿರುದ್ಧ ವಾಹನ ಚಾಲಕರು ಬೈದಾಡಿ ಬಾಯಿ ಸೇವೆ ಮುಗಿಸಿಕೊಂಡು ತಮ್ಮ ಗಾಡಿಗಳಿಗೆ ಇಂಧನ ತುಂಬಿಸಿಕೊಂಡು ರೊಯ್ಯನೆ ಹೊರಡುತ್ತಿರುವಾಗ ಬೊಗಳೆ ರಗಳೆರ ಸೊಂಪಾದಕರಿಗೆ ಸಂಕಟದ ಸ್ಥಿತಿ ಬಂದಿದೆ. ಬೊಗಳೆ ಬಿಡುವುದರಲ್ಲಿ ಬೊಗಳೂರಿನಲ್ಲೇ ಫೇಮಸ್ಸಾದ ಸೊಂಪಾದಕರನ್ನೇ ಮೀರಿಸುವ ಹಾಗೆ ಎಡ, ಬಲ ಪಕ್ಷಗಳು, ಕೈ ಕಾಲು ಪಕ್ಷಗಳು, ನಿಧಾನ ಮಂತ್ರಿ, ಪಿತ್ಥ ಸಚಿವರು ಬೊಗಳೆ ಬಿಡುತ್ತಿರುವುದನ್ನು ಕಂಡು ಅಕ್ಷರಶಃ ಕಂಗಾಲಾಗಿದ್ದಾರೆ.

ವಿಜ್ಞಾನಿಗಳು ಗಾಳ ಹಾಕಿ ಮೀನುಗಳನ್ನು ಹಿಡಿಯುವ ಕೋತಿಯನ್ನು ಪತ್ತೇ ಹಚ್ಚಿರುವುದನ್ನು ಎಸ್.ಎಂ.ಎಸ್ ಮೂಲಕ ತಿಳಿದು ಗಾಬರಿಯಿಂದ ನಾಪತ್ತೆಯಾಗಿದ್ದ ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದಿರಾ? ಇಲ್ಲಿ ಓದಿ…

ಪ್ರಕಾಶ್ ಶೆಟ್ಟಿ ಗೆರೆಗಳ ಪಂಚ್

ಬೆಲೆಯೇರಿಕೆ, ಪೆಟ್ರೋಲು ಬೆಲೆ ತುಟ್ಟಿ… ಕಾಂಗ್ರೆಸ್ ಸರಕಾರದ ನಿಷ್ಠೆಯ ನವೀಕರಣ… ಎಲ್ಲಕ್ಕೂ ಪ್ರಕಾಶ್ ಶೆಟ್ಟಿ ಗೆರೆಗಳನ್ನು ಕೊಟ್ಟಿದ್ದಾರೆ, ಗೆರೆಗಳ ಮೂಲಕ ಬರೆ ಎಳೆದಿದ್ದಾರೆ. ಇಲ್ಲಿ ನೋಡಿ .

ಪಂಚ್ ಲೈನ್

ಪಂಚಿಗಾಗಿ ಲೈನುಗಳನ್ನು ಬರೆಯುವ ಗಣೇಶ್ ಬಹುದೊಡ್ಡ ಮ್ಯಾನೇಜ್ ಮೆಂಟ್ ಗುರುವಾಗುವ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದಾರೆ. ಅವರ ಇತ್ತೀಚಿನ ಪಂಚ್ ಸಾಲುಗಳನ್ನೇ ನೋಡಿ…
ಕೊಲೆ ಮಾಡಿಯೂ ಶಿಕ್ಷೆ ಅನುಭವಿಸಬಾರದೆಂದರೆ ಏನು ಮಾಡಬೇಕು?
ನಿಷ್ಪಕ್ಷಪಾತ, ಸತ್ಯನಿಷ್ಠತೆ, ನ್ಯಾಯಯುತ ಸುದ್ದಿಗೆ ಅತ್ಯುತ್ತಮ ಉದಾಹರಣೆ ಯಾವುದು?
ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ ನಾವೇನು ಮಾಡಬಹುದು?

ಕಾಲ ಚಕ್ರ

ಸಮೃದ್ಧ ಸರಕಾರಕ್ಕೆ ಮೂರೇ ಗೇಣು ಎಂದು ಹಲುಬುತ್ತಿರುವ ಬಿಜೆಪಿ ಸರಕಾರ ಭಿನ್ನಮತೀಯತೆಯನ್ನು ಶಮನ ಮಾಡಿ ಶವಸಂಸ್ಕಾರ ಮಾಡುವುದಕ್ಕೆ ಏನು ಮಾಡಬೇಕು ಅನ್ನೋ ಪ್ರಶ್ನೆಗೆ ನಮ್ ನಂಜ ಹಿಂಗಂತ ಉತ್ತರಿಸವ್ನೆ ಇಲ್ಲಿ… ‘ಹಂಗಲ್ಲ ಸರ್ರ, ಕೊನಿಗೆ ನೂರಾ ಹತ್ತು ಜನಕ್ಕ ನೂರಾ ಹತ್ತು ಮಂತ್ರಿಗಳಾದ್ರೂ ಆದ್ರೆ ಆವಾಗ ಭಿನ್ನ ಮತಾನೇ ಇರಂಗಿಲ್ಲ ಏನಂತೀರಿ…’

………………………………………………………………

ಕಳೆದ ಸಂಚಿಕೆಯ ಬ್ಲಾಗ್ ಬೀಟ್

ಬ್ಲಾಗ್ ಬೀಟ್ 8

28 ಮೇ

ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್‌ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.

………………………………………………………………..

ಪಂಚ್ ಲೈನ್

ಪಂಚು ಹೊಡೆಯುವುದರಲ್ಲಿ ಸಿದ್ಧ ಹಸ್ತರಾಗಿ ಕಾಣುವ ಗಣೇಶ್ ನಿಜವಾದ ಮೌತ್ ಕಾ ಸೌದಾಗರ್ ನಮ್ಮ ಸೋನಿಯಮ್ಮ ಹೇಳಿದ ಹಾಗೆ ಗುಜರಾಥಿನ ನರೇಂದ್ರ ಮೋದಿಯಲ್ಲ. ಮತ್ತ್ಯಾರು? ಹಾಗಾದರೆ ಈ ಲಿಂಕನ್ನು ಕ್ಲಿಕ್ಕಿಸಿ.

ಸಂತೆ ನೆರೆಯುವುದಕ್ಕೆ ಮುನ್ನವೇ ಗಂಟು ಕಳ್ಳರು ದೌಡಾಯಿಸಿದರು ಎಂಬಂತೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನೂ ತೆರೆಯುವುದಕ್ಕೆ ಮುಂಚೆಯೇ ಅದಕ್ಕೆ ಯಾವ ಹೆಸರಿಡಬೇಕು ಎಂಬ ಬಗ್ಗೆ ಚೌಕಾಶಿ ನಡೆಯಲು ಶುರುವಾಗಿದೆ. ಕೆಂಪೇ‘ಗೌಡ’ರ ಹೆಸರಿಡಬೇಕೋ, ವಿಶ್ವೇಶ್ವರ‘ಅಯ್ಯ’ನವರ ಹೆಸರಿಡಬೇಕೋ, ಟಿಪ್ಪು ‘ಸುಲ್ತಾನ್’ನ ಹೆಸರನ್ನು ಮಡಗಬೇಕೋ ಅನ್ನೋ ವಿಚಾರವಾಗಿ ಭಾರೀ ‘ಚರ್ಚೆ’ ನಡೆಯುತ್ತಿದೆ. ಇದಕ್ಕೊಂದು ಒಳ್ಳೆಯ ಪರಿಹಾರವನ್ನು ಗಣೇಶ್ ಕೊಟ್ಟಿದ್ದಾರೆ. ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಸೂಕ್ತ?

………………………………………………………………..

ಬೊಗಳೆ ರಗಳೆ

ಕನ್ನಡ ನಾಡಿನ ಪತ್ರಿಕೆಗಳೆಲ್ಲಾ ರಾಜಕೀಯದ ಬಿಸಿಯನ್ನು ಮನೆ ಮೆನೆಗೆ ತಲುಪಿಸಿ ಬೇಸಿಗೆಯನ್ನು ಮತ್ತಷ್ಟು ಅಸಹನೀಯಗೊಳಿಸುವಲ್ಲಿ ಪೈಪೋಟಿ ನಡೆಸುತ್ತಿರುವಾಗ ಬೊಗಳೂರು ಭಯ ಭೀತ ಬ್ಯೂರೋ ತಾನೇನೂ ಕಡಿಮೆಯಿಲ್ಲ ಎಂದು ರಾಜಕೀಯ ವರದ್ದಿಯನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ನೇತಾಗಳೆಂಬ ಭೂತಗಳು ಓಡಾಡುತ್ತಾ ಭಯೋತ್ಪಾದನೆ ಮಾಡುತ್ತಿರುವುದನ್ನು ‘ರಾತ್ರಿ ಏಳರವರೆಗಿನ ಪ್ರಜ್ಞಾವಂತ’ ಮತದಾರ ಅನಂತರ ಕಣ್ಣು ಕೆಂಪು ಮಾಡಿಕೊಂಡು ನೋಡುತ್ತಿರುವುದನ್ನು ಬೊಗಳೂರು ವಾಹ್-ರದ್ದಿಗಾರ ತಂದು ಸುರಿದಿದ್ದಾನೆ.

………………………………………………………………..

ಮಜಾವಾಣಿ

ಚುನಾವಣೆಗಳು ಹತ್ತಿರಬಂದಾಗ ಪತ್ರಿಕೆಗಳು ಮದುವೆ ಮನೆಯಲ್ಲಿ ಸಿಂಗಾರಗೊಂಡ ವಧುವಿನ ಹಾಗಾಗಿರುತ್ತವೆ. ಇದಕ್ಕೆ ಅಂತರ್ಜಾಲದ ಅತ್ಯಂತ ‘ಜನಪ್ರಿಯ’ ‘ವಿಶ್ವಾಸಾರ್ಹ’ ಪತ್ರಿಕೆಯೂ ಕಡಿಮೆಯಿಲ್ಲ. ಅವರು ಚುನಾವಣೆಯ ಸಂದರ್ಭದಲ್ಲಿ ಜನಮತವನ್ನು ಸಂಗ್ರಹಿಸಿ ತಮ್ಮ ಪತ್ರಿಕೆಯಲ್ಲಿ ಚಾಪಿಸಿಕೊಂಡಿದ್ದಾರೆ. ಮುಂದಿನದು ಸಂಪಾದಕರ ಮಾತುಗಳಲ್ಲಿ…

ಕರ್ನಾಟಕ ರಾಜ್ಯಕ್ಕೆ ಇದು ಸಂಕ್ರಮಣ ಕಾಲ. ಯಾರಿಂದ ನಾವು ಮೋಸ ಹೋಗಬೇಕೆಂದು ನಿರ್ಧರಿಸ ಬೇಕಾದ ಕಾಲ. ಇಂತಹ ಸಂದರ್ಭದಲ್ಲಿ,  ನಮ್ಮ ನಾಡು,ನುಡಿ, ರಾಜಕಾರಣಗಳ ಬಗೆಗೆ ನಮ್ಮ ಜನರ ನಾಡಿ ಹೇಗೆ ಮಿಡಿಯುತ್ತಿದೆ, ಅವರನ್ನು ಕಾಡುತ್ತಿರುವ ವಿಷಯಗಳೇನು ಎಂಬುದನ್ನು ಅವರ ಮಾತುಗಳಲ್ಲೇ ಇಲ್ಲಿ ಹಿಡಿದು ಕೊಡಲಾಗಿದೆ.   – ಸಂ.

………………………………………………………………..

ಪ್ರಕಾಶ್ ಶೆಟ್ಟಿ ಪಂಚ್

ಶೆಟ್ಟಿಯವರ ಗೆರೆಗಳಲ್ಲಿ ಸೆರೆಯಾಗಿರುವ ಸಂಗತಿಗಳು ಹಲವು. ಗರ್ಜಿಸುವುದನ್ನೇ ಮರೆತಿರುವ ಮಹಾರಾಷ್ಟ್ರದ ಹಳೆಯ ಹುಲಿಯ ಅಳಲಾದರೂ ಏನು? ಜಾರ್ಜು ಬುಸ್ಸು ಇನ್ ಫ್ಲೇಷನ್ನಿಗೆ ಸಂ-ಚೋದಿಸಿದ ಕಾರಣ ಯಾವುದು? ಚುನಾವಣೆ ಕಿಕ್ಕಿಗಾಗಿ ಕೆಲವು ಶೆಟ್ಟಿ ಪಂಚುಗಳು….

………………………………………………………………..