Tag Archives: ಬೀಚಿ

ಅವರಿವರ ಭಯಾಗ್ರಫಿ

10 ಮಾರ್ಚ್

ಖ್ಯಾತರ, ಹೆಸರುವಾಸಿಯಾದ ಮಂದಿಯ ಬದುಕು ವರ್ಣರಂಜಿತವಾದದ್ದು. ಅಂತಹ ವ್ಯಕ್ತಿಗಳ ಜೀವನದಲ್ಲಿ ನಡೆದ ರಸಪ್ರಸಂಗಗಳನ್ನು ಕಲೆ ಹಾಕುವ ಪುಟ ”ಅವರಿವರ ಭಯಾಗ್ರಫಿ”. ನೀವು ಓದಿದ, ನಿಮ್ಮ ಗಮನಕ್ಕೆ ಬಂದ, ನಿಮ್ಮ ಸಂಗ್ರಹದಲ್ಲಿರುವ ಪ್ರಸಂಗಗಳನ್ನು ಕಳುಹಿಸಿಕೊಡಲು ಸಂಪರ್ಕಿಸಿ (nagesamrat[at]gmail[dot]com).

ಈ ಸಂಚಿಕೆಯ ಸ್ಯಾಂಪಲ್:

ಕತ್ತೆ ಜನ್ಮ

ಬೀಚಿಯವರ ಆತ್ಮಕಥನ ‘ನನ್ನ ಭಯಾಗ್ರಫಿ’ಯಲ್ಲಿನ ರಸಪ್ರಸಂಗ:
ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ದಿನದಂದು ಮಾತ್ರ ಮಾಧ್ವರು ಕೂಡಾ ಸ್ಮಾರ್ತ ಬ್ರಾಹ್ಮಣರು ಪೂಜೆ ಮಾಡುವ ಈಶ್ವರನ ಗುಡಿಗೆ ಹೋಗುತ್ತಿದ್ದರು. ನಮ್ಮೂರಲ್ಲಿ ಗೋಕರ್ಣೇಶ್ವರ ಗುಡಿ ಎಂದು ಒಂದಿದೆ. ಎಲ್ಲ ಮಾಧ್ವರೊಟ್ಟಿಗೆ ನಾನೂ ಒಂದು ಬಾರಿ ಹೋಗಿದ್ದೆ. ಕೊಬ್ಬರಿ ತಿಂದು ಬಂದಿದ್ದೆ.
“ಎಂದೂ ಹೋಗದೆ ಶಿವರಾತ್ರಿಯ ದಿನ ಮಾತ್ರ ಈಶ್ವರನ ಗುಡಿಗೆ ಏಕೆ ಹೋಗಬೇಕು?” ಎಂದು ನನ್ನ ಸೋದರತ್ತೆಯ ಗಂಡನನ್ನು ಕೇಳಿದ್ದೆ.
“ವರ್ಷಕ್ಕೊಮ್ಮೆ ಆತನ ದರ್ಶನಾನೂ ಮಾಡಿಕೋಬೇಕಪ್ಪಾ. ಇಲ್ಲದಿದ್ರೆ ಮುಂದೆ ಕತ್ತೆ ಜನ್ಮ ಬರ್ತದೆ.”
ನಮ್ಮ ಮಾವ ಹೇಳಿದ ಸಮ್ಜಾಯಿಸಿ ಇದು. ಅಂದಿನಿಂದ ಬೀದಿಯಲ್ಲಿ ಒಂದು ಕತ್ತೆಯನ್ನು ನೋಡಿದಾಗಲೆಲ್ಲ ಪಾಪ! ಇದು ಹಿಂದಿನ ಜನ್ಮದಲ್ಲಿ ಮಾಧ್ವ ಬ್ರಾಹ್ಮಣ ಆಗಿತ್ತು ಎಂದಂದುಕೊಳ್ಳುತ್ತಿದ್ದೆ. ಯಾರೋ ಆಚಾರ್ಯರ ಮುಂದು ಈ ಮಾತನ್ನಂದು ಬೈಗುಳನ್ನೂ ತಿಂದಿದ್ದೆ.

ವಾರದ ವಿವೇಕ 15

17 ಆಗಸ್ಟ್

……………………………………………………….

ಗಾಳಿಯಲ್ಲಿ ಮಹಲು ಕಟ್ಟಿ.

ಅದರಲ್ಲಿ ತಪ್ಪೇನಿಲ್ಲ.

ಆದರೆ ನೆಲದ ಮೇಲೆ ಅದಕ್ಕೆ

ಫೌಂಡೇಶನ್ ಹಾಕುವುದನ್ನು ಮರೆಯಬೇಡಿ!

– ಮದನ ಮೋಹನ ಮಾಳವೀಯ

……………………………………………………….

ವಾರದ ವಿವೇಕ 14

1 ಆಗಸ್ಟ್

…………………………………………………………………………………….

ಕಣ್ಣೀರು ಸುರಿಯುವುದೊಂದೇ ಹೆಣ್ಣಿನ
ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳೂ ಅದನ್ನೇ
ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನೂ
ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿ ಬಿಡುತ್ತಿದ್ದವು.

– ಬೀchi

…………………………………………………………………………………….

ವಾರದ ವಿವೇಕ 12

2 ಜುಲೈ

……………………………………………………………….

ಒಳ್ಳೆಯವರು ಎನ್ನಿಸಿಕೊಂಡವರು

ಇನ್ನೂ ಒಳ್ಳೆಯವರಾಗೇ ಇದ್ದಾರೆ ಅಂದರೆ

ಅವರಿಗೆ ಭ್ರಷ್ಟರಾಗುವ

ಅವಕಾಶ ಸಿಕ್ಕಿಲ್ಲ ಎಂಬುದೇ ಕಾರಣ.

– ಬೀಚಿ

……………………………………………………………….

ನಗಾರಿ ರೆಕಮಂಡೆಶನ್ 7

6 ಮೇ

ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.

ನಗೆ ಸಾಹಿತಿಗಳ ಹೆಸರಿನಲ್ಲಿ ‘ನಗದು’ ಮಾಡಿಕೊಳ್ಳುವ ‘ನಗಿಸುವ ಏಜೆಂಟ’ರುಗಳು ನಮ್ಮನ್ನು ತಮ್ಮ ರಿಪೀಟಾದ ಜೋಕುಗಳಿಂದ, ಹಳಸಿಹೋದ ಹಾಸ್ಯಪ್ರಸಂಗಗಳು, ಕದ್ದು ತಂದ, ಕೆರೆದು-ಹರಿದು ಹಿಂದಿ, ಇಂಗ್ಲೀಷು ಚಾನಲ್ಲುಗಳಿಂದ ಅಪಹರಿಸಿದ ಹಾಸ್ಯವನ್ನು ನಮ್ಮ ಮುಂದಿಟ್ಟು ಅಳುವಂತೆ ಮಾಡುವಲ್ಲಿ ಸಫಲರಾಗುತ್ತಿರುವಾಗ ಕೆಲವೇ ಕೆಲವರು ನಮ್ಮನ್ನು ನಗಿಸುವಲ್ಲಿ ಸಫಲರಾಗಿದ್ದಾರೆ. ಅಂಥವರಲ್ಲಿ ಪ್ರಮುಖರು ಪ್ರಾಣೇಶ್. ಪ್ರಾಣೇಶ್ ಬೀಚಿ.

ಓದನ್ನು ಮುಂದುವರೆಸಿ

ವಾರದ ವಿವೇಕ 9

6 ಮೇ

………………………………………………………………………………………..

ಜೀವನದಲ್ಲಿ ಆಶಾಭಂಗವನ್ನು

ತಪ್ಪಿಸಬೇಕಾದರೆ ಇರುವ

ಒಂದೇ ಉಪಾಯ: ಯಾವುದನ್ನೂ ಆಶಿಸಲೇಬಾರದು.

-ಬೀchi

………………………………………………………………………………………..

(ಕಳೆದ ವಾರದ ವಾರದ ವಿವೇಕ)

ವಾರದ ವಿವೇಕ 8

19 ಏಪ್ರಿಲ್

………………………………………………………………….

ಹೊಟ್ಟೆಯ ಹಸಿವು ಬಾಳಿನ

ಯಾವ ದುಃಖಕ್ಕೂ

ಸೊಪ್ಪು ಹಾಕುವುದಿಲ್ಲ.

– ಬೀಚಿ

………………………………………………………………….

(ಕಳೆದ ವಾರದ ವಾರದ ವಿವೇಕ)