Tag Archives: ಬಂಗಾರಪ್ಪ

ತೊಣಚಪ್ಪನ ಡೈರಿ

9 ಫೆಬ್ರ

ಸಿಎಂ ಪತ್ನಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ: ಬಂಗಾರಪ್ಪ

ಮಾಡಬೇಕಾದ ತನಿಖೆಗಳನ್ನು ಪೂರೈಸುವುದಕ್ಕೇ ಸಿಬಿಐಗೆ ಸಮಯ ಸಾಲುತ್ತಿಲ್ಲ ಹೀಗಿರುವಾಗ ನಮ್ಮ ನಾಡಿನ ಮೆಚ್ಚಿನ ನಾಯಕರ ಹೆಂಡತಿಯರ ಸಾವು, ಹೆಂಡತಿಯರ ಸಂಖ್ಯೆ, ಅಧಿಕೃತ – ಅನಧಿಕೃತ ಕುಟುಂಬಗಳ ತನಿಖೆಯನ್ನು ಅವರಿಗೆ ಹೊರಿಸಿದರೆ ಅವನ್ನು ಮುಗಿಸುವುದು ಈ ಸೌರಮಂಡಲ ಕರಗಿದ ಮೇಲೆಯೇ! ಹೀಗಾಗಿ ನಾನು ವೈಯಕ್ತಿಕವಾಗಿ ನಮ್ಮ ನಾಡಿನ ಪ್ರಜ್ಞಾವಂತರನ್ನು ಕೇಳಿಕೊಳ್ತೇನೆ, ನಮ್ ಸಾಮ್ರಾಟನ ಚೇಲ ಕುಚೇಲನಿಗೆ ಈ ತನಿಖೆಗಳನ್ನು ವಹಿಸಿ. ಕೆಲ್ಸ ಇಲ್ದೆ ನೊಣ ಹೊಡೀತ ‘ಕೀಟ ದಯಾ ಸಂಘ’ದವರ ಕೆಂಗಣ್ಣಿಗೆ ಆತ ಗುರಿಯಾಗೋದನ್ನ ತಪ್ಸಿ.

ರಂಗಸ್ಥಳದಲ್ಲೇ ಪ್ರಾಣ ಬಿಡುವುದು ಕಲಾವಿದ ಶಂಭು ಹೆಗಡೆಯವರ ಇಚ್ಛೆಯಾಗಿತ್ತು: ವರದಿ

ಇದೇ ಆಸೆ ನಮ್ ರಾಜಕೀಯ ನಾಯಕ್ರುಗಳಿಗೆ ಬಂದ್ರೆ ಎಷ್ಟ್ ಚಂದವೋ! ಭಾಷಣ ಬಿಗಿಯುವಾಗ್ಲೇ ಪ್ರಾಣ ಬಿಡೋ ಹಂಗೇನಾದ್ರೂ ಆದ್ರೆ ಈ ದೇಶ್ದ ನಾಸ್ತಿಕ್ರೆಲ್ಲ ಹೋಲ್ಸೇಲಾಗಿ ದೇವ್ರಿಗೆ ಅಡ್ಡ ಬೀಳ್ತಾರೆ!

ಮಾಧ್ಯಮಗಳಿಗೆ ಅಂಕುಶ ಹಾಕಲು ಆಚಾರ್ಯ ಚಿಂತನೆ- ವರದಿ

ನಮ್ ನ್ಯೂಸ್ ಚಾನಲ್ಲು, ಪೇಪರುಗಳ್ನ ಹ್ಯಾಂಡ್ಲ್ ಮಾಡೋಕೆ ಕ್ಲಾಸಲ್ಲಿ ಮಾನಿಟರ್ ಇದ್ಧಂಗೆ ಒಬ್ಬ ಒಂಬುಡ್ಸ್ ಮನ್ (ಮಾಧ್ಯಮ ಧರ್ಮಾಧಿಕಾರಿ)ಯನ್ನು ನೇಮಿಸುವ ಆಲೋಚ್ನೆ ಮಾಡ್ತಿದಾರಂತೆ ನಮ್ ಗೃಹ ಮಂತ್ರಿಗಳು. ಈ ಸಂದರ್ಭದಲ್ಲಿ ಮೊದ್ಲು ರಾಜ್ಯದಾಗೆ ಗಲಾಟೆ ಗದ್ಲ ತಪ್ಸೋ ಒಳ್ಳೆ ಅಧಿಕಾರಿ ನೇಮಕ ಆಗ್ಬೇಕು ಅಂತ ವಿರೋಧ ಪಕ್ಷದೋರಂಗೆ ವಾದ ಮಾಡೋದು ಬಿಟ್ಟು ನಮ್ ನಗೆ ಸಾಮ್ರಾಟ್ರನ್ನ ಒಂಬುಡ್ಸ್ ಮನ್ ಹುದ್ದೆಗೆ ಶಿಫಾರಸ್ಸು ಮಾಡ್ರಿ. ಹಂಗಾದ್ರೂ ಅವ್ರನ್ನ ನಗೆ ನಗಾರಿಯಿಂದ ಒದ್ದೋಡ್ಸೋಕೆ ಸಾಧ್ಯವಾಗುತ್ತೆ!