ಸಂಪದಿಗ ಗಣೇಶರ ಬರಹವನ್ನು ಅಲ್ಲಿಂದ ನೇರವಾಗಿ ಹೈಜ್ಯಾಕ್ ಮಾಡಿ ಇಲ್ಲಿ ಹಾಕಿದ್ದೇವೆ.
– ನಗೆ ಸಾಮ್ರಾಟ್
ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ.
ನಾಯಕಿ, ಕೋಟ್ಯಾಧೀಶ…(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?..
ಪೂರ್ತಿ ಕೇಳಿ..) ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ ?
-ನಮ್ಮದು ಡಿಫರೆಂಟೂ..
ನಾಯಕಿ,ಟು ಪೀಸ್ ಡ್ರೆಸ್ನಲ್ಲಿ..
‘ಸೂರ್ಯಗ್ರಹಣ’ದ ಬಗ್ಗೆ (ಡಿಫರೆಂಟೂ) ಹಾಡು ಹೇಳುತ್ತಾ..,
ಪೆಂಗ್ವಿನ್ ಜತೆ (ಅಪ್ಪ ಅಂಟಾರ್ಟಿಕಾದಿಂದ ತಂದು, ಮಗಳಿಗೆ ೧೮ನೇ ವರ್ಷಕ್ಕೆ ಉಡುಗೊರೆ ಕೊಟ್ಟ ಪೆಟ್ ಪ್ರಾಣಿ)..
ಎಮ್.ಜಿ.ರೋಡಲ್ಲಿ ಬರುತ್ತಾಳೆ..
ಬೆವರಿಂದ ಪೂರ್ತಿ ಒದ್ದೆ.. ಕ್ಯಾಮರ ಗ್ರಹಣದಿಂದ ಹಿಡಿದು ಎಲ್ಲೆಲ್ಲಾ ಏಂಗ್ಲ್ಗಳು ಇಲ್ಲವೋ ಅಲ್ಲೆಲ್ಲಾ ಓಡಾಡುತ್ತದೆ.
ಈಗ ನಾಯಕನ ಎಂಟ್ರಿ..
ನಾಯಕ ಡಾಕ್ಟ್ರು?..ಊಹೂಂ
ಇಂಜಿನಿಯರ್? ಸಾಫ್ಟ್ವೇರ್? ..ಊಹೂಂ
ಲಾಯರ್? ಪೋಲೀಸ್? ಕಳ್ಳ? .. ಊಹೂಂ..
ಎಸೆಲ್ಸಿ ಫೈಲ್? ೩ನೇ ಕ್ಲಾಸ್ ಫೈಲ್? ಎಲ್.ಕೆ.ಜಿ ? ..ಊಹೂಂ ಉಹೂಂ..
ಚಮ್ಮಾರ,ಗಮಾರಾ.. ಸಾರಿ ನಮ್ಮದು ಡಿಫರೆಂಟೂ..
ಕ್ಯಾಮರ ಮೊದಲಿಗೆ ನಾಯಕನ ಎದುರಿನ ತಟ್ಟೆ..ಅದರ ಮೇಲಿರುವ ೩-೪ ಕಾಯಿನ್ ಮೇಲೆ
ಫೋಕಸ್ ಮಾಡುತ್ತಾ ನಿದಾನವಾಗಿ ಮೇಲೆ ಬರುತ್ತದೆ..
ಟೇಂ..ಟೆ..ಡೇಂ..(ಸುಮ್ಮನಿದ್ದೀರಲ್ಲಾ, ವಿಶ್ಲ್ ಹಾಕ್ರೀ..)
ನಾಯಕನದು ತೆಳ್ಳಗಿನ ದೇಹ.. (ಆದರೆ ಸಿಕ್ಸ್ ಪ್ಯಾಕ್ ಶಕ್ತಿ ಇದೆ)
ಹರಿದ ಅಂಗಿ..(ಒಳಗೆ ಮೃದು ಹೃದಯ)
ತೂತು ಬಿದ್ದ ಪ್ಯಾಂಟ್ (..ಬೇಡ ಬಿಡಿ..)
ಮುಖಕ್ಕೆ ಮುತ್ತಿಕ್ಕುವ ಹಿಪ್ಪಿ ಕೂದಲು (ಪೆಂಗ್ವಿನ್ ಮರಿಯಾ.. ಪೆಂಗ್ವಿನ್ ಮರಿಯಾ..
ಹಾಡಿಗೆ ಆ ಕೂದಲು ಕುಣಿಯುವ ಸ್ಟೈಲ್ ನೋಡಲು ಮರೆಯದಿರಿ)
ಈ ಭಿಕ್ಷುಕ.. ಸಾರಿ..ನಾಯಕ ತಾನು ಕುಳಿತಿದ್ದ ಹರಕು ಗೋಣಿಯನ್ನು,
ಬೆವರಿಂದ ಒದ್ದೆಯಾಗಿ, ಚಳಿಯಲ್ಲಿ ನಡುಗುವ ನಾಯಕಿಗೆ ಕೊಡುವನು.
ಇದಕ್ಕೆಲ್ಲಾ ಕಾರಣವಾದ ಸೂರ್ಯಗ್ರಹಣವನ್ನು ನಾಯಕ ಬೈಯುವ ದೃಶ್ಯ ಸೂಪರ್
ಆಗಿ ಬಂದಿದೆ.
ಲವ್ ಸುರು..
ಈಗ ವಿಲನ್ ಎಂಟ್ರಿ ಆಗಬೇಕಲ್ಲ..ಯಾರು ವಿಲನ್?
ಹುಡುಗಿಯ ಅಪ್ಪ..? ಊಹೂಂ.. ಡಿಫರೆಂಟೂ..
ಅಪ್ಪ ಖುಷಿಯಿಂದ ಒಪ್ಪುವನು. ಮದುವೆ ಗ್ರಾಂಡ್ ಆಗಿ ಸ್ವಿಜರ್ಲ್ಯಾಂಡ್ನಲ್ಲಿ ಮಾಡೋಣವೆಂದು ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಹೊರಡುವನು.
ಹಾಗಾದರೆ ವಿಲನ್? ನಾಯಕನ ಭಿಕ್ಷುಕ ಅಪ್ಪ!! (ಡಿಫರೆಂಟೂ)
‘ನೋಡು ಮಗಾ, ಅವನ ತಿಂಗಳ ಸಂಬಳಕ್ಕಿಂತ ನಿನ್ನ ಸಂಪಾದನೆ ಜಾಸ್ತಿ ಮಗಾ.
ನಿನಗೀಗಿರುವ ಸ್ವಾತಂತ್ರ್ಯ ಕಳಕೊಳ್ಳುತ್ತೀಯಾ? ಅಮೆರಿಕಾ ಅಧ್ಯಕ್ಷನ ಬೀಗ ಎಂದು
ನನ್ನ ಸಂಪಾದನೆಗೂ ಖೋತಾ ಆಗುವುದು. ಬ್ರಿಗೇಡ್ ರೋಡಲ್ಲಿ ಬೇಡುವ ನಂಜಿಯೊಂದಿಗೆ ನಿನ್ನ ಮದುವೆ ನಾಳೆನೇ ಅಶೋಕ ಹೋಟಲಲ್ಲಿ..’
ಇಂಟರ್ವಲ್
***
ಭಿಕ್ಷುಕರ ಸಂಘದವರು ನಿರ್ಮಿಸಿದ್ದರಿಂದ (ಲೆಕ್ಕವಿಲ್ಲದ-ಲೆಕ್ಕವಿಲ್ಲದಷ್ಟು ಹಣ) ಧಾರಾಳವಾಗಿ ಖರ್ಚು ಮಾಡಿದ್ದಾರೆ.
ಕೇವಲ ನಾಯಕನ ಒಂದೊಂದು ಡ್ರೆಸ್ಗೆ ೧೦ ಲಕ್ಷ ರೂ. ಖರ್ಚಾಗಿದೆ-ಲಂಡನ್ನಿಂದ ತರಿಸಿ ಹರಿದು ಚಿಂದಿ ಮಾಡಿ ಹಾಕಿದ್ದು ಅಂದಾಗ ಎಷ್ಟು ಅದ್ದೂರಿಯಾಗಿ ಬಂದಿರಬಹುದು ಯೋಚಿಸಿ.
ಈಗ ಇಂಟರ್ವಲ್ ನಂತರದ ಕತೆ-
ಅಮೆರಿಕಾದ ಫೈಟರ್ ಜೆಟ್ಗಳು ಅಶೋಕಾ ಹೋಟಲ್ ಸುತ್ತುವರಿದವು ಅಂದ್ರಾ-ಊಹೂಂ..
ಡಿಫರೆಂಟೂ..
ನಿರಾಶೆಯಿಂದ ಅಮೆರಿಕಾ ಅಧ್ಯಕ್ಷ, ತನ್ನ ಮಗಳನ್ನು ಕರಕೊಂಡು ವಿಮಾನದಲ್ಲಿ ಹಿಂದೆ
ಹೋಗುವನು. ಕತೆಯಲ್ಲಿ ಟ್ವಿಸ್ಟ್- ಡಂಡಂ ಲಾಡಂನ ಕಡೆಯ ಟೆರರಿಸ್ಟ್ಗಳು ವಿಮಾನ ಹೈಜಾಕ್ ಮಾಡುವರು!!
ಇನ್ನೇನು ಅಮೆರಿಕಾದ ಅಧ್ಯಕ್ಷನ ಹಣೆಗೆ ಗನ್ ಗುರಿಯಿಡಬೇಕು ಅನ್ನುವಾಗ ಹಾಡು ಕೇಳುವುದು-‘ಜುಂಯ ಜುಂಯ ಜುಂಯಾ ಜುಂಯ..’-
ವಿಮಾನದ ಮೇಲೆ ನಾಯಕ ತನ್ನ ಭಿಕ್ಷುಕ ಬಳಗದೊಂದಿಗೆ ಡ್ಯಾನ್ಸ್ ಮಾಡುತ್ತಿರುವನು ನಾಯಕಿ ಕಿಟಕಿಯಿಂದ ಹೊರಗೆ ಇಣುಕಿ ನಾಯಕನಿಗೆ ಕಣ್ಣು ಹೊಡೆಯುವಳು..
ಕ್ಲೈಮ್ಯಾಕ್ಸ್ (ಗೌಪ್ಯ)ನಲ್ಲಿ ಹಾಲಿವುಡ್/ಬಾಲಿವುಡ್/ಎಲ್ಲಾವುಡ್ಗಳಲ್ಲಿ ಯಾರೂ ಮಾಡದಿದ್ದ ಡಿಫರೆಂಟ್ ಸಾಹಸವಿದೆ.
ಕನ್ನಡ,ತಮಿಳು,ಹಿಂದಿ..ಯಾವ ಚಿತ್ರವೂ ಎಪ್ರಿಲ್ನಲ್ಲಿ ಬಿಡುಗಡೆಯಾಗಲು ರೆಡಿಯಿಲ್ಲ.
ಯಾಕೆಂದರೆ ಎಪ್ರಿಲ್ ೧ಕ್ಕೆ ನಮ್ಮ ಸಿನೆಮಾ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು. ಅಕ್ಷರಶಃ ಚಿಂದಿ ಉಢಾಯಿಸುವುದು!!
ಬ್ಲಾಗ್ ಬೀಟ್ 9
17 ಜೂನ್ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಸುದ್ದೀಶ. ಇವರ ಬ್ಲಾಗ್ ಬೀಟ್ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
………………………………………………………………
ಬೊಗಳೆ ರಗಳೆ
ಇಂಧನ ಬೆಲೆಯೇರಿಕೆಯ ವಿರುದ್ಧ ವಾಹನ ಚಾಲಕರು ಬೈದಾಡಿ ಬಾಯಿ ಸೇವೆ ಮುಗಿಸಿಕೊಂಡು ತಮ್ಮ ಗಾಡಿಗಳಿಗೆ ಇಂಧನ ತುಂಬಿಸಿಕೊಂಡು ರೊಯ್ಯನೆ ಹೊರಡುತ್ತಿರುವಾಗ ಬೊಗಳೆ ರಗಳೆರ ಸೊಂಪಾದಕರಿಗೆ ಸಂಕಟದ ಸ್ಥಿತಿ ಬಂದಿದೆ. ಬೊಗಳೆ ಬಿಡುವುದರಲ್ಲಿ ಬೊಗಳೂರಿನಲ್ಲೇ ಫೇಮಸ್ಸಾದ ಸೊಂಪಾದಕರನ್ನೇ ಮೀರಿಸುವ ಹಾಗೆ ಎಡ, ಬಲ ಪಕ್ಷಗಳು, ಕೈ ಕಾಲು ಪಕ್ಷಗಳು, ನಿಧಾನ ಮಂತ್ರಿ, ಪಿತ್ಥ ಸಚಿವರು ಬೊಗಳೆ ಬಿಡುತ್ತಿರುವುದನ್ನು ಕಂಡು ಅಕ್ಷರಶಃ ಕಂಗಾಲಾಗಿದ್ದಾರೆ.
ವಿಜ್ಞಾನಿಗಳು ಗಾಳ ಹಾಕಿ ಮೀನುಗಳನ್ನು ಹಿಡಿಯುವ ಕೋತಿಯನ್ನು ಪತ್ತೇ ಹಚ್ಚಿರುವುದನ್ನು ಎಸ್.ಎಂ.ಎಸ್ ಮೂಲಕ ತಿಳಿದು ಗಾಬರಿಯಿಂದ ನಾಪತ್ತೆಯಾಗಿದ್ದ ಏಕಸದಸ್ಯ ಬ್ಯೂರೋದ ಸಮಸ್ತ ಸಿಬ್ಬಂದಿ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದಿರಾ? ಇಲ್ಲಿ ಓದಿ…
ಪ್ರಕಾಶ್ ಶೆಟ್ಟಿ ಗೆರೆಗಳ ಪಂಚ್
ಬೆಲೆಯೇರಿಕೆ, ಪೆಟ್ರೋಲು ಬೆಲೆ ತುಟ್ಟಿ… ಕಾಂಗ್ರೆಸ್ ಸರಕಾರದ ನಿಷ್ಠೆಯ ನವೀಕರಣ… ಎಲ್ಲಕ್ಕೂ ಪ್ರಕಾಶ್ ಶೆಟ್ಟಿ ಗೆರೆಗಳನ್ನು ಕೊಟ್ಟಿದ್ದಾರೆ, ಗೆರೆಗಳ ಮೂಲಕ ಬರೆ ಎಳೆದಿದ್ದಾರೆ. ಇಲ್ಲಿ ನೋಡಿ ೧ ೨ ೩.
ಪಂಚ್ ಲೈನ್
ಪಂಚಿಗಾಗಿ ಲೈನುಗಳನ್ನು ಬರೆಯುವ ಗಣೇಶ್ ಬಹುದೊಡ್ಡ ಮ್ಯಾನೇಜ್ ಮೆಂಟ್ ಗುರುವಾಗುವ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದಾರೆ. ಅವರ ಇತ್ತೀಚಿನ ಪಂಚ್ ಸಾಲುಗಳನ್ನೇ ನೋಡಿ…
ಕೊಲೆ ಮಾಡಿಯೂ ಶಿಕ್ಷೆ ಅನುಭವಿಸಬಾರದೆಂದರೆ ಏನು ಮಾಡಬೇಕು?
ನಿಷ್ಪಕ್ಷಪಾತ, ಸತ್ಯನಿಷ್ಠತೆ, ನ್ಯಾಯಯುತ ಸುದ್ದಿಗೆ ಅತ್ಯುತ್ತಮ ಉದಾಹರಣೆ ಯಾವುದು?
ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ ನಾವೇನು ಮಾಡಬಹುದು?
ಕಾಲ ಚಕ್ರ
ಸಮೃದ್ಧ ಸರಕಾರಕ್ಕೆ ಮೂರೇ ಗೇಣು ಎಂದು ಹಲುಬುತ್ತಿರುವ ಬಿಜೆಪಿ ಸರಕಾರ ಭಿನ್ನಮತೀಯತೆಯನ್ನು ಶಮನ ಮಾಡಿ ಶವಸಂಸ್ಕಾರ ಮಾಡುವುದಕ್ಕೆ ಏನು ಮಾಡಬೇಕು ಅನ್ನೋ ಪ್ರಶ್ನೆಗೆ ನಮ್ ನಂಜ ಹಿಂಗಂತ ಉತ್ತರಿಸವ್ನೆ ಇಲ್ಲಿ… ‘ಹಂಗಲ್ಲ ಸರ್ರ, ಕೊನಿಗೆ ನೂರಾ ಹತ್ತು ಜನಕ್ಕ ನೂರಾ ಹತ್ತು ಮಂತ್ರಿಗಳಾದ್ರೂ ಆದ್ರೆ ಆವಾಗ ಭಿನ್ನ ಮತಾನೇ ಇರಂಗಿಲ್ಲ ಏನಂತೀರಿ…’
………………………………………………………………
ಕಳೆದ ಸಂಚಿಕೆಯ ಬ್ಲಾಗ್ ಬೀಟ್
ಟ್ಯಾಗ್ ಗಳು:ಗಣೇಶ್, ಪಂಚ್ ಲೈನ್, ಪ್ರಕಾಶ್ ಶೆಟ್ಟಿ, ಬೊಗಳೆ ರಗಳೆ, ಬ್ಲಾಗ್ಸ್, blogs, comments