Tag Archives: ಅವರಿವರ ಭಯಾಗ್ರಫಿ

ಅವರಿವರ ಭಯಾಗ್ರಫಿ

3 ಸೆಪ್ಟೆಂ

 

ಖ್ಯಾತರ, ಹೆಸರುವಾಸಿಯಾದ ಮಂದಿಯ ಬದುಕು ವರ್ಣರಂಜಿತವಾದದ್ದು. ಅಂತಹ ವ್ಯಕ್ತಿಗಳ ಜೀವನದಲ್ಲಿ ನಡೆದ ರಸಪ್ರಸಂಗಗಳನ್ನು ಕಲೆ ಹಾಕುವ ಪುಟ ”ಅವರಿವರ ಭಯಾಗ್ರಫಿ”. ನೀವು ಓದಿದ, ನಿಮ್ಮ ಗಮನಕ್ಕೆ ಬಂದ, ನಿಮ್ಮ ಸಂಗ್ರಹದಲ್ಲಿರುವ ಪ್ರಸಂಗಗಳನ್ನು ಕಳುಹಿಸಿಕೊಡಲು ಸಂಪರ್ಕಿಸಿ (nagesamrat[at]gmail[dot]com).

ಈ ಸಂಚಿಕೆಯ ಸ್ಯಾಂಪಲ್:

ಸುಧಾರಣೆ

 

ಅಮೇರಿಕಾ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅಧಿಕಾರವಧಿಯ ಉತ್ತರಾರ್ಧ ಆರ್ಥಿಕ ಹಿಂಜರಿತದಿಂದ ಪೀಡಿತವಾಗಿತ್ತು. ರೊನಾಲ್ಡ್ ರೇಗನ್ ಅಧ್ಯಕ್ಷರಾಗುವವರೆಗೆ ಅಮೇರಿಕಾದ ಆರ್ಥಿಕತೆ ಸುಧಾರಿಸಲೇ ಇಲ್ಲ.

 

“ನೀವು ಕೆಲಸ ಕಳೆದುಕೊಂದರೆ ಅದು ಆರ್ಥಿಕ ಕುಸಿತ.” ಅಧಿಕಾರ ಸ್ವೀಕರಿಸಿ ರೇಗನ್ ಮಾತನಾಡಿದರು, “ನಿಮ್ಮ ನೆರೆಯ ಮನೆಯವನು ಕೆಲಸ ಕಳೆದುಕೊಂಡರೆ ಅದು ಆರ್ಥಿಕ ಹಿಂಜರಿತ.”

 

ಮತ್ತೆ ಸುಧಾರಣೆ? “ಜಿಮ್ಮಿ ಕಾರ್ಟರ್ ಕೆಲಸ ಕಳೆದುಕೊಂಡರೆ ಅದು ಸುಧಾರಣೆ!”

 

 

 

ಅವರಿವರ ಭಯಾಗ್ರಫಿ

10 ಮಾರ್ಚ್

ಖ್ಯಾತರ, ಹೆಸರುವಾಸಿಯಾದ ಮಂದಿಯ ಬದುಕು ವರ್ಣರಂಜಿತವಾದದ್ದು. ಅಂತಹ ವ್ಯಕ್ತಿಗಳ ಜೀವನದಲ್ಲಿ ನಡೆದ ರಸಪ್ರಸಂಗಗಳನ್ನು ಕಲೆ ಹಾಕುವ ಪುಟ ”ಅವರಿವರ ಭಯಾಗ್ರಫಿ”. ನೀವು ಓದಿದ, ನಿಮ್ಮ ಗಮನಕ್ಕೆ ಬಂದ, ನಿಮ್ಮ ಸಂಗ್ರಹದಲ್ಲಿರುವ ಪ್ರಸಂಗಗಳನ್ನು ಕಳುಹಿಸಿಕೊಡಲು ಸಂಪರ್ಕಿಸಿ (nagesamrat[at]gmail[dot]com).

ಈ ಸಂಚಿಕೆಯ ಸ್ಯಾಂಪಲ್:

ಕತ್ತೆ ಜನ್ಮ

ಬೀಚಿಯವರ ಆತ್ಮಕಥನ ‘ನನ್ನ ಭಯಾಗ್ರಫಿ’ಯಲ್ಲಿನ ರಸಪ್ರಸಂಗ:
ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ದಿನದಂದು ಮಾತ್ರ ಮಾಧ್ವರು ಕೂಡಾ ಸ್ಮಾರ್ತ ಬ್ರಾಹ್ಮಣರು ಪೂಜೆ ಮಾಡುವ ಈಶ್ವರನ ಗುಡಿಗೆ ಹೋಗುತ್ತಿದ್ದರು. ನಮ್ಮೂರಲ್ಲಿ ಗೋಕರ್ಣೇಶ್ವರ ಗುಡಿ ಎಂದು ಒಂದಿದೆ. ಎಲ್ಲ ಮಾಧ್ವರೊಟ್ಟಿಗೆ ನಾನೂ ಒಂದು ಬಾರಿ ಹೋಗಿದ್ದೆ. ಕೊಬ್ಬರಿ ತಿಂದು ಬಂದಿದ್ದೆ.
“ಎಂದೂ ಹೋಗದೆ ಶಿವರಾತ್ರಿಯ ದಿನ ಮಾತ್ರ ಈಶ್ವರನ ಗುಡಿಗೆ ಏಕೆ ಹೋಗಬೇಕು?” ಎಂದು ನನ್ನ ಸೋದರತ್ತೆಯ ಗಂಡನನ್ನು ಕೇಳಿದ್ದೆ.
“ವರ್ಷಕ್ಕೊಮ್ಮೆ ಆತನ ದರ್ಶನಾನೂ ಮಾಡಿಕೋಬೇಕಪ್ಪಾ. ಇಲ್ಲದಿದ್ರೆ ಮುಂದೆ ಕತ್ತೆ ಜನ್ಮ ಬರ್ತದೆ.”
ನಮ್ಮ ಮಾವ ಹೇಳಿದ ಸಮ್ಜಾಯಿಸಿ ಇದು. ಅಂದಿನಿಂದ ಬೀದಿಯಲ್ಲಿ ಒಂದು ಕತ್ತೆಯನ್ನು ನೋಡಿದಾಗಲೆಲ್ಲ ಪಾಪ! ಇದು ಹಿಂದಿನ ಜನ್ಮದಲ್ಲಿ ಮಾಧ್ವ ಬ್ರಾಹ್ಮಣ ಆಗಿತ್ತು ಎಂದಂದುಕೊಳ್ಳುತ್ತಿದ್ದೆ. ಯಾರೋ ಆಚಾರ್ಯರ ಮುಂದು ಈ ಮಾತನ್ನಂದು ಬೈಗುಳನ್ನೂ ತಿಂದಿದ್ದೆ.

ಅವರಿವರ ಭಯಾಗ್ರಫಿ

5 ಜನ

ಅವರು ನಮಗಿಂತ ಶ್ರೇಷ್ಠವಾಗಿ ಬದುಕಿ ಬಾಳಿದರು ಎಂಬ ಕಾರಣಕ್ಕೇ ಅವರ ಬದುಕಿನ ಸಂಗತಿಗಳು ನಮಗೆ ವಿಪರೀತದ ಆಸಕ್ತಿಯನ್ನು ಕೆರಳಿಸುತ್ತವೆ. ಅವರ ಬದುಕಿನ ಹಾಸ್ಯ ಘಳಿಗೆಗಳನ್ನು ನಾವು ಮನಃಪೂರ್ವಕವಾಗಿ ಅನುಭವಿಸುತ್ತೇವೆ. ಅವರ ಬದುಕಿನ ಘಟನೆಗಳನ್ನು ನಾವು ಯಾವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಾದರೂ ಉದ್ಧರಿಸುತ್ತೇವೆ, ಬರಹಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂಥವರ ಬದುಕಿನ ರಸ ನಿಮಿಷಗಳನ್ನು ಕೂಡಿಡುವುದಕ್ಕಾಗಿಯೇ ನಗಾರಿಯ ಖಜಾನೆಯಲ್ಲಿ ತೆರೆದುಕೊಂಡಿರುವ ಪುಟ ‘ಅವರಿವರ ಭಯಾಗ್ರಫಿ’.

ಈ ಸಂಚಿಕೆಯ ಸ್ಯಾಂಪಲ್ ಭಯಾಗ್ರಫಿ:

ಪುಟ್ಟ ಟಿಪ್ಪಣಿ

rudyard-kipling-1

ಒಮ್ಮೆ ದಿನಪತ್ರಿಕೆಯೊಂದನ್ನು ಓದುತ್ತಿದ್ದ ರುಡ್ಯಾರ್ಡ್ ಕಿಪ್ಲಿಂಗ್ ಕುತೂಹಲಕಾರಿ ಸುದ್ದಿಯೊಂದನ್ನು ಓದಿದರು. ಕೂಡಲೇ ಪತ್ರಿಕೆಯ ಸಂಪಾದಕರಿಗೆ ಒಂದು ಟಿಪ್ಪಣಿ ಬರೆದರು:

“ನಾನು ಸತ್ತಿರುವ ಸುದ್ದಿಯನ್ನು ಇದೀಗ ತಾನೆ ನಿಮ್ಮ ಪೇಪರ್‌ನಲ್ಲಿ ಓದಿದೆ. ನಿಮ್ಮ ಪತ್ರಿಕೆಯ ಚಂದಾದಾರರ ಪಟ್ಟಿಯಿಂದ ನನ್ನ ಹೆಸರು ತೆಗೆದುಹಾಕುವುದನ್ನು ಮರೆಯಬೇಡಿ.”

ಅವರಿವರ ಭಯಾಗ್ರಫಿ

16 ಜೂನ್

ಅವರು ನಮಗಿಂತ ಶ್ರೇಷ್ಠವಾಗಿ ಬದುಕಿ ಬಾಳಿದರು ಎಂಬ ಕಾರಣಕ್ಕೇ ಅವರ ಬದುಕಿನ ಸಂಗತಿಗಳು ನಮಗೆ ವಿಪರೀತದ ಆಸಕ್ತಿಯನ್ನು ಕೆರಳಿಸುತ್ತವೆ. ಅವರ ಬದುಕಿನ ಹಾಸ್ಯ ಘಳಿಗೆಗಳನ್ನು ನಾವು ಮನಃಪೂರ್ವಕವಾಗಿ ಅನುಭವಿಸುತ್ತೇವೆ. ಅವರ ಬದುಕಿನ ಘಟನೆಗಳನ್ನು ನಾವು ಯಾವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಾದರೂ ಉದ್ಧರಿಸುತ್ತೇವೆ, ಬರಹಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂಥವರ ಬದುಕಿನ ರಸ ನಿಮಿಷಗಳನ್ನು ಕೂಡಿಡುವುದಕ್ಕಾಗಿಯೇ ನಗಾರಿಯ ಖಜಾನೆಯಲ್ಲಿ ತೆರೆದುಕೊಂಡಿರುವ ಪುಟ ‘ಅವರಿವರ ಭಯಾಗ್ರಫಿ’.

ಈ ಸಂಚಿಕೆಯ ಸ್ಯಾಂಪಲ್ ಭಯಾಗ್ರಫಿ:

ಹುಡುಗೀರು ಏನು ಮಾಡ್ತಿದ್ರು?

32832.player

ಖ್ಯಾತ ಕ್ರಿಕೆಟ್ ಪಟು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಡಗ್ಲಾಸ್ ಜಾರ್ಡಿನ್ ವಿಜಯ್ ಮಾಧವ್ ಜೀ ಮರ್ಚೆಂಟ್‌ರನ್ನು ಭಾರತ ಕಂಡ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಹೊಗಳಿರಬಹುದು, ಆದರೆ ಅವರ ಆಟವನ್ನು ನೋಡುವುದು ಬೋರು ಹೊಡೆಸುತ್ತಿತ್ತು.

೧೯೬೦ರ ಬಾಂಬೆ ಟೆಸ್ಟ್ ಮ್ಯಾಚ್ ಸಂದರ್ಭದಲ್ಲಿ ಅಬ್ಬಾಸ್ ಅಲಿ ಬೇಗ್ ಎಂಬ ಆಟಗಾರನಿಗೆ ಪ್ರೇಕ್ಷಕರ ಸಾಲಿನಲ್ಲಿ ಹುಡುಗಿಯೊಬ್ಬಳು ಚುಂಬಿಸಿದಳು.

“ನಾನು ಬ್ಯಾಟ್ ಮಾಡುವಾಗ ಈ ಹುಡುಗಿಯರೆಲ್ಲಾ ಏನು ಮಾಡುತ್ತಿದ್ದರು?” ಕೇಳಿದರು ಮರ್ಚೆಂಟ್. ಅದಕ್ಕೆ ಎ.ಎಫ್.ಎಸ್.ತಲ್ಯಾರ್‌ಖಾನ್ ಉತ್ತರಿಸಿದರು, “ನಿದ್ದೆ ಮಾಡುತ್ತಿದ್ದರು!”

ಅವರಿವರ ಭಯಾಗ್ರಫಿ!

3 ಜುಲೈ

ಅವರು ನಮಗಿಂಥ ಶ್ರೇಷ್ಠವಾಗಿ ಬದುಕಿ ಬಾಳಿದರು ಎಂಬ ಕಾರಣಕ್ಕೇ ಅವರ ಬದುಕಿನ ಸಂಗತಿಗಳು ನಮಗೆ ವಿಪರೀತದ ಆಸಕ್ತಿಯನ್ನು ಕೆರಳಿಸುತ್ತವೆ. ಅವರ ಬದುಕಿನ ಹಾಸ್ಯ ಘಳಿಗೆಗಳನ್ನು ನಾವು ಮನಃಪೂರ್ವಕವಾಗಿ ಅನುಭವಿಸುತ್ತೇವೆ. ಅವರ ಬದುಕಿನ ಘಟನೆಗಳನ್ನು ನಾವು ಯಾವ ಕಾರ್ಯಕ್ರಮ, ಸಭೆ, ಸಮಾರಂಭಗಳಲ್ಲಾದರೂ ಉದ್ಧರಿಸುತ್ತೇವೆ, ಬಹಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂಥವರ ಬದುಕಿನ ರಸ ನಿಮಿಷಗಳನ್ನು ಕೂಡಿಡುವುದಕ್ಕಾಗಿಯೇ ನಗಾರಿಯ ಖಜಾನೆಯಲ್ಲಿ ತೆರೆದುಕೊಂಡಿರುವ ಪುಟ ‘ಅವರಿವರ ಭಯಾಗ್ರಫಿ’.

ಈ ಸಂಚಿಕೆಯ ಸ್ಯಾಂಪಲ್ ಭಯಾಗ್ರಫಿ:

ಶ್ರೀಮಾನ್ ಘಾ


ವಂಡರ್ ವೈಎನ್‌ಕೆ ಪನ್ನಿಗೆ ಹೆಸರಾದವರು. ಲಘು ಬರಹದ ಧಾಟಿ ಅವರ ಮಾಧ್ಯಮವಾಗಿತ್ತು. ಅದರಲ್ಲೇ ಅವರು ವಿಮರ್ಶೆ ಮಾಡುತ್ತಿದ್ದರು. ವರದಿ ಕೊಡುತ್ತಿದ್ದರು. ವ್ಯಕ್ತಿ ಪರಿಚಯವೂ ಮಾಡಿಕೊಡುತ್ತಿದ್ದರು.


ಒಮ್ಮೆ ಅವರ ಅಭಿಮಾನಿಯೊಬ್ಬರು ತಮ್ಮ ನಾಟಕ ಪ್ರದರ್ಶನಕ್ಕೆ ವೈ.ಎನ್.ಕೆಯವರನ್ನು ಆಹ್ವಾನಿಸಿದ್ದರು. ತಮ್ಮ ವಾರದ ಅಂಕಣದಲ್ಲಿ ಅವರು ಆ ನಾಟಕದ ಬಗ್ಗೆ ವಿಮರ್ಶೆ ಬರೆದಿದ್ದರು. ಆ ನಾಟಕದ ಹೆಸರು ‘ಭ್ರಮೆ’. ವೈ.ಎನ್.ಕೆ ಬರೆದದ್ದು ಇಷ್ಟು ‘ಕಳೆದ ವಾರ ‘ಭ್ರಮೆ’ ಹೆಸರಿನ ಒಂದು ನಾಟಕ ನೋಡಿದೆ. ಅದನ್ನು ಒಂದು ನಾಟಕ ಎಂದು ತಿಳಿದಿದ್ದಾರಲ್ಲ ಅದು ನಾಟಕಕಾರನ ಭ್ರಮೆ. ಹಾಗೆಯೇ, ಅದು ಚೆನ್ನಾಗಿರಬಹುದೇನೋ ಎಂದು ನಿರೀಕ್ಷಿಸ್ತಾರಲ್ಲ, ಅದು ಪ್ರೇಕ್ಷಕರ ಇನ್ನೊಂದು ಭ್ರಮೆ.’