Archive | ಇತರೆ RSS feed for this section

ಸಾಮ್ರಾಟರಿಗೊಂದು ಓಲೆ :‌೨೧ ಕುಶಾಲ ಅನಾದಿ ತಾಳಗಳು

20 ಆಗಸ್ಟ್

ನಲ್ಮೆಯ ನಗೆಸಾಮ್ರಾಟ್,

“ಭಾಗ್ಯದೊಡನೆ ಭೇಟಿ” ನಿಮ್ಮ ಸಾಮ್ರಾಜ್ಯದ ಮುಖಪುಟ ಮರ್ಯಾದೆಗೆ ಪಾತ್ರವಾಗಿರುವುದನ್ನು ಕಂಡು ಆಶ್ಚರ್ಯಾನಂದವಾಯಿತು. ಈ ಲೇಖನಕ್ಕೆ ನಿಮ್ಮ ಹಾಸ್ಯಪ್ರಜ್ಞಾವಂತ ಓದುಗರ ಹರ್ಷಚಿತ್ತವನ್ನು ಭೇಟಿ ಮಾಡುವ ಭಾಗ್ಯವನ್ನು ದೊರಕಿಸಿಕೊಟ್ಟದಕ್ಕಾಗಿ ನನ್ನ *ನಗಾರಖಾನೆಯಿಂದ ನಿಮಗೆ ೨೧ ಕುಶಾಲ ಅನಾದಿತಾಳಗಳು!

-ಎಸ್. ಜಿ. ಸೀತಾರಾಮ್, ಮೈಸೂರು.

*ನಗಾರಖಾನೆ:ನಗಾರಿ ಮತ್ತಿತರ ಬ್ಯಾಂಡ್ ವಾದ್ಯಗಳನ್ನಿಡುವ ಮತ್ತು “ಬಾರಿಸುವ” ಜಾಗ. ಗೌರವ, ಮರ್ಯಾದೆ, ಸಂತೋಷಗಳ ಸೂಚನೆಗಾಗಿ ೨೧ ಕುಶಾಲ ತೋಪುಗಳನ್ನು (gun salute) ನೀಡುವ ಒಂದು ಸಂಪ್ರದಾಯವು ಮೈಸೂರಿನ ಅರಮನೆಯಲ್ಲಿತ್ತು.ಹೆಮ್ಮೆಯ ಎಮ್ಮೆಪುರ (ಮೈಸೂರು = ಮಹಿಷೂರು = Buffaloshire) ಪುತ್ರನಾಗಿ, ಅದೇ ಭವ್ಯ ಭಾವನೆಗಳನ್ನು ನಾನಿಲ್ಲಿ ೨೧ ನಗಾರಿ ತಾಳಗಳ ಮೂಲಕ ಸೂಚಿಸುತ್ತಿದ್ದೇನೆ.

ಭಾಗ್ಯದೊಡನೆ ಭೇಟಿ ಬರಹವನ್ನು ಇಲ್ಲಿ ಓದಬಹುದು.

ನಗಾರಿ ಕಿಕ್ಕಿಂಗ್!

28 ನವೆಂ

ತಲೆಮರೆಸಿಕೊಂಡು ಹೋಗುವುದರಲ್ಲಿ ಸಾಮ್ರಾಟರಾಗಿರುವ ನಗೆ ಸಾಮ್ರಾಟರನ್ನು ಹುಡುಕಿ ಕರೆತರುವುದಕ್ಕೆ ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಗಾರಿಯ ಉಸ್ತುವಾರಿಯನ್ನು ಯುವ ಸದಸ್ಯರೊಬ್ಬರು ವಹಿಸಿಕೊಂಡದ್ದು, ತಮ್ಮ ಅತ್ಯಾಪ್ತ ಚೇಲ ಕುಚೇಲ ತಮ್ಮ ವಿರುದ್ಧವೇ ತಿರುಗಿ ಬಿದ್ದದ್ದು ಇವೆಲ್ಲವುಗಳನ್ನು ಕಂಡ ಸಾಮ್ರಾಟರು ಕಂಗಾಲಾಗಿದ್ದರು. ಹಲ್ಲಿಲ್ಲದ ತನ್ನ ಬಳಿಯಿರುವ ಕಡಲೆಯನ್ನು ಕಿತ್ತುಕೊಳ್ಳಲು ಬರುವ ‘ಹಲ್ಕಟ್’ ಮಂದಿಯಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದರು.

ಅವರು ಎಲ್ಲಿ ಹೋಗಿದ್ದಾರೆ ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಸಣ್ಣ ಮಾಹಿತಿಯೂ ಇರಲಿಲ್ಲ. ನಗೆ ನಗಾರಿಯ ಪಾಸ್ ವರ್ಡ್ ಅವರ ಸ್ವತ್ತಾದ್ದರಿಂದ ಉಳಿದ ಸದಸ್ಯರ್ಯಾರೂ ನಗಾರಿಯಲ್ಲಿ ಕೆಲಸ ಮಾಡಲೂ ಸಾಧ್ಯವಾಗಲಿಲ್ಲ. ಸಾಮ್ರಾಟರನ್ನು ಹುಡುಕುತ್ತಾ ಹೋಗಬಾರದ ಜಾಗಕ್ಕೆಲ್ಲ ಹೋಗಿಬಂದ ಕುಚೇಲ ನಿರಾಶೆಯಿಂದ ಕೈಚೆಲ್ಲಿ ಕೂತ. ಆಗ ಸಾಮ್ರಾಟರು ತಮ್ಮ ಬೆನ್ನ ನೆರಳಿನಂತಿರುವ ತಮ್ಮ ಆಲ್ಟರ್ ಈಗೋವನ್ನೂ ತೊರೆದು ಜಾಗ ಖಾಲಿಮಾಡಿರುವುದು ಬೆಳಕಿಗೆ ಬಂತು. ಸಾಮ್ರಾಟರ ಅನುಪಸ್ಥಿತಿಯಲ್ಲಿ ಅವರ ಆಲ್ಟರ್ ಈಗೋ ಅರ್ಧಕ್ಕೆ ನಿಲ್ಲಿಸಿದ್ದ ಬಂದ್ರೆ ತಾರೆ ಸಂದರ್ಶನ ಪೂರೈಸುವ ಉಮ್ಮೇದಿನಲ್ಲಿ ನಾಪತ್ತೆಯಾಗಿತ್ತು. ಬಂದ್ರೆ ತಾರೆಯವರು ವಿಪರೀತದ ಡಯಟಿಂಗ್ ನಿಂದ ಸಣಕಲಾಗಿರುವುದನ್ನು ತನ್ನ ಎರಡು ಕಣ್ಣುಗಳಿಂದ ನೋಡಲಾರದೆ ಕಣ್ಣಿರು ಗರೆಯುತ್ತಿದ್ದ ಆಲ್ಟರ್ ಈಗೋವನ್ನು ತೊಣಚಪ್ಪ ಸಂತೈಸಿ ಕರೆದು ತಂದು ಸಾಮ್ರಾಟರ ಪತ್ತೆಗೆ ನೇಮಿಸಿದ. ಆಲ್ಟರ್ ಈಗೋ ಜೀವಿಗಳು ಪ್ರವೇಶಿಸಲು ಯೋಗ್ಯವಲ್ಲದ ಪ್ರದೇಶಗಳನ್ನೆಲ್ಲ ಹೊಕ್ಕು ಸಾಮ್ರಾಟರಿಗೆ ಹುಡುಕಾಡಿದ ಅವರ ಸುಳಿವೆಲ್ಲೂ ಸಿಕ್ಕಲಿಲ್ಲ.

ಕಡೆಗೆ ನಗಾರಿಯ ಸದಸ್ಯರೆಲ್ಲ ನಿರಾಶೆಯ ಮಡುವಲ್ಲಿ ಮುಳುಗಿರುವಾಗ, Yes We can ಮಂತ್ರದ ಒಡೆಯ, ಹಿರಿಯಣ್ಣ ಅಮೇರಿಕಾದ ಪ್ರಥಮ ಕರಿಯ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದರು. ಅಮೇರಿಕಾದ ಈ ಮಾಂತ್ರಿಕ ಮಾತುಗಾರನ ಮೋಡಿಗೆ ಸಿಲುಕಿ ತಮ್ಮ ಗೋಳನ್ನು ಮರೆಯುವುದಕ್ಕೆ ಎಲ್ಲರೂ ಟಿವಿ ಚಾಲೂ ಮಾಡಿ ಕೂತೆವು. ವ್ಯಾಪಾರಕ್ಕಾಗಿ, ಉದ್ಯೋಗ ಸೃಷ್ಟಿಗಾಗಿ ಭಾರತಕ್ಕೆ ಬಂದಿರುವ ಒಬಾಮನ ಬೆಂಬಲಕ್ಕೆಂದು ನಾವು ಮೈಕೊರೆಯುವ ಚಳಿಯಲ್ಲಿ ಅಮೇರಿಕನ್ ಕಂಪೆನಿಯ ಎಸಿ ಚಾಲೂ ಮಾಡಿ, ಪೆಪ್ಸಿ ಹೀರುತ್ತ, ಕೆ.ಎಫ್.ಸಿ ಕೋಳಿ ತೊಡೆಯನ್ನು ಮೆಲ್ಲತೊಡಗಿದೆವು. ಜಗತ್ತಿನ ಶ್ರೀಮಂತ ರಾಷ್ಟ್ರದ ಗನಘಂಭೀರ ಅಧ್ಯಕ್ಷರು ಕೂತಿದ್ದಾರೆ. ಅವರೆದುರು ಪುಟ್ಟ ಮಕ್ಕಳು ಕುಣಿಯುತ್ತಿದ್ದಾರೆ. ಕಾನ್ವೆಂಟ್ ಶಾಲೆಯಲ್ಲಿ, ಮನೆಯಲ್ಲಿ ಎಂದೂ ತೊಟ್ಟಿರದ ಬಟ್ಟೆಗಳನ್ನು ತೊಟ್ಟು ಎಂದೂ ಕೇಳಿರದ ಹಾಡಿಗೆ ಎಂದೂ ಕಂಡಿರದ ವ್ಯಕ್ತಿಯ ಎದುರು ನೃತ್ಯ ಮಾಡುವ ದೈನೇಸಿ ಸ್ಥಿತಿಯ ಬಗ್ಗೆ ಮರುಗುತ್ತ ಮಕ್ಕಳೂ ಗಂಭೀರವಾಗಿದ್ದರು. ಇದ್ದಕ್ಕಿದ್ದಂತೆ ಏನೋ ಮಾಂತ್ರಿಕವಾದದ್ದು ಸಂಭವಿಸಿತು. ಗಂಭೀರವಾಗಿ ಕುಳಿತಿದ್ದ ಒಬಾಮ ವೇದಿಕೆಯ ಮೇಲೆ ನಡೆದರು. ಮಕ್ಕಳು ಹಾಕುತ್ತಿದ ಹೆಜ್ಜೆಗಳನ್ನು ಅನುಕರಿಸತೊಡಗಿದರು. ಭಾರತದ ನೆಲದಲ್ಲಿ ನಿಂತು ಭಾರತದ ಟ್ಯೂನಿಗೆ ಹೆಜ್ಜೆ ಹಾಕಿಬಿಟ್ಟರು.

ನಮ್ಮಿಡೀ ತಂಡಕ್ಕೆ ಆಕಾಶವೇ ಕಳಚಿ ಖಾಲಿಯಾದ ಕೆ.ಎಫ್.ಸಿಯ ರಟ್ಟಿನ ಡಬ್ಬಿಯಲ್ಲಿ ಬಿದ್ದ ಹಾಗಾಯ್ತು. ಅಮೇರಿಕಾದ ಅಧ್ಯಕ್ಷ ಭಾರತದ ಜನರ ಮನರಂಜನೆಯ ವಸ್ತುವಾದ ವ್ಯಂಗ್ಯದ ಸೃಷ್ಟಿ ಹುಲುಮಾನವರಿಂದ ಸಾಧ್ಯವಿಲ್ಲದು. ಗಂಭೀರನಾದ ಭಗವಂತನಿಗೂ ಇಂತಹ ಸನ್ನಿವೇಶವನ್ನು ಸೃಷ್ಟಿಸುವ ಆಸಕ್ತಿ ಇಲ್ಲ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಇಂತಹ ಅಪೂರ್ವ ಘಟನೆ ಘಟಿಸಿತೆಂದರೆ ಅಲ್ಲಿ ಸಾಮ್ರಾಟರು ಇರಲೇಬೇಕು ಎಂದು ನಮಗೆ ಕ್ಷಣಮಾತ್ರಕ್ಕೆ ಹೊಳೆದುಬಿಟ್ಟಿತು.

ಕೂಡಲೆ ನಗಾರಿ ಬ್ಯುರೋದ ಮುಂಬೈ ಕಚೇರಿಗೆ ಸಾಮ್ರಾಟರ ಭಾವಚಿತ್ರವನ್ನು ಕಳುಹಿಸಿ ಪತ್ತೆ ಹಚ್ಚಿಸಲು ತಿಳಿಸಲಾಯ್ತು. ಯಾವುದೇ ಅಂತರಾಷ್ಟ್ರೀಯ ಬಿಕ್ಕಟ್ಟು ಏರ್ಪಡಬಾರದೆಂದು ಒಬಾಮ ದೇಶ ಬಿಡುವವರೆಗೆ ಕಾಯುವಂತೆ ತಿಳಿಸಲಾಯ್ತು. ಕೂಡಲೆ ಸಿಕ್ಕಿ ಬಿದ್ದ ಸಾಮ್ರಾಟರ ಮನವೊಪ್ಪಿಸಿ ಎಳೆ ತರುವುದರಲ್ಲಿ ಇಷ್ಟು ಸಮಯ ಘಟಿಸಿತು.

ಸಾಮ್ರಾಟರ ಅನುಪಸ್ಥಿತಿಯಲ್ಲಿ ನಿದ್ದೆಗೆ ಜಾರಿದ ನಗಾರಿಯ ಪ್ರತಿಸ್ಪರ್ಧಿ ಪತ್ರಿಕೆಯು ಸಾಮ್ರಾಟರ ಆಗಮನದ ಸುದ್ದಿಯು ತಲುಪಿದ ಕೂಡಲೆ ಎಚ್ಚೆತ್ತಿದೆ. ಸೋಮವಾರ ಧರೆ ಸ್ಪೋಟಗೊಳ್ಳುವಂತಹ ಸುದ್ದಿಯೊಂದನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದೆ. ಬಹುಶಃ ಅದು ಸಾಮ್ರಾಟರು ನಗಾರಿಯ ಕೇಂದ್ರ ಕಛೇರಿಗೆ ಹಿಂದಿರುಗಿದ ಸುದ್ದಿಯನ್ನೇ ಮೊದಲು ಬ್ರೇಕ್ ಮಾಡುವ ಹೊಂಚು ಹಾಕಿಕೊಂಡಿದ್ದರೆ, ಈ ಮೂಲಕ ನಾವು ಅವರಿಗೆ ಮರುಕ ಸೂಚಿಸಲು ಇಚ್ಛಿಸುತ್ತೇವೆ.

 

 

ಮುಂದುವರೆದದ್ದು ಎಲ್ಲಿ?

6 ಆಕ್ಟೋ

picture-16

ಮತ್ತೊಂದು ಪರೋಡಿ: ಲೈಫು ಇಷ್ಟೇ ಅಲ್ಲ…

6 ಆಕ್ಟೋ

dh

(ದಿಲೀಪ್ ಹೆಗಡೆ ಬರೆದಿರುವ ‘ಪಂಚರಂಗಿ ಹಾಡುಗಳು’ ಸಾಂಗಿನ ಪರೋಡಿ ನಗಾರಿಯಲ್ಲಿ…)

 

ಕಾಲೇಜು ಕ್ಯಾಂಪಸ್ಸಿನ ತುಂಬಾ
ಕಲರ್ ಕಲರ್ ಚಿಟ್ಟೆಗಳು
ಮಚ್ಚಾ, ಸಿಸ್ಯಾ.. ಸದಾ
ಗಿಜಿಗುಟ್ಟುವ ಪಡ್ಡೆಗಳ ಹರಟೇ ಕಟ್ಟೆಗಳು
ಹುಡುಗಿಯರ ಹಿಂದಲೆದು
ಸವೆಯುವ ಚಪ್ಪಲಿಯ ಅಟ್ಟೆ ಗಳು
ಪರೀಕ್ಷೆ ಫಲಿತಾಂಶದಲ್ಲಿ
ನಿರೀಕ್ಷೆಯಂತೆ ದೊಡ್ಡ ಸಣ್ಣ ಮೊಟ್ಟೆಗಳು
ಬದುಕು ಅನಿವಾರ್ಯವಾದಾಗ
ದುಡಿದು ದಣಿವ ರಟ್ಟೆಗಳು

ಎಷ್ಟು ಮಾಡಿದರೂ ಸಾಲದೆಂಬ
ಬಾಸ್ ರೂಪದ ಕತ್ತೆಗಳು
ಸಿಗದ ಪ್ರಶಂಸೆ ಮುಂಬಡ್ತಿ
ವಿಶೇಷ ಭತ್ತೆಗಳು
ಮದುವೆಯ ಸಂಭ್ರಮದಲ್ಲಿ
ಅಪ್ಪ ಅಮ್ಮ ಮಾವ ಅತ್ತೆಗಳು
ಮೈ ತುಂಬಾ ಮಲ್ಲಿಗೆ ಮುಡಿದ
ಮೊದಲ ರಾತ್ರಿಯ ಮೆತ್ತೆಗಳು

ಅಂಕಲ್ ಆಗುತ್ತಲೇ
ಎದ್ದು ಕಾಣುವ ಹೊಟ್ಟೆಗಳು
ನಾಳೆ ಹುಟ್ಟುವ ಕೂಸಿಗೆ
ಇಂದೇ ಹೊಲಿದಿಡುವ ಬಟ್ಟೆಗಳು
ಕೂಸಿಗೆ ತುತ್ತುಣಿಸಿ
ಖಾಲಿಯಾಗುವ ಊಟದ ತಟ್ಟೆಗಳು
ಮಕ್ಕಳ ಭವಿಷ್ಯಕ್ಕೆ ತುಂಬಿಡುವ
ಧನ ಕನಕದ ಕೊಟ್ಟೆಗಳು
ಪರರ ಆಸರೆಯಲ್ಲಿ ನೊಂದು
ಬತ್ತುವ ಕಣ್ಣೀರ ಕಟ್ಟೆಗಳು

ಕೊನೆಗೊಮ್ಮೆ ಬೋರಾಗಿ
ಕರೆಸಿಕೊಳ್ಳುವ ಭಗವಂತನ ವ್ಯವಸ್ಥೆಗಳು …
ಲೈಫು ಇಷ್ಟೇ ಅಲ್ಲ…

ಚಿತ್ರಗಳು ವಿಚಿತ್ರಗಳು ನಗೆಗಳು ನಗಾರಿಗಳು

18 ಸೆಪ್ಟೆಂ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್

b3

 

ಮೌಸು ನುಂಗು ಸುಡೋಕು ಬಿಡಿಸು, ಲೈಫು ಇಷ್ಟೇನೇ…

ಟೂನ್ ಕಾರ್ನರ್

15 ಸೆಪ್ಟೆಂ

clip_image001

Satish acharya

clip_image002

http://www.dnaindia.com/cartoons/1436872

clip_image003

http://timesofindia.indiatimes.com/articleshowpics/6486383.cms

clip_image004

http://www.cricinfo.com/page2/content/story/476146.html?selected=3

ಲೈಫು ವೈಫು ಇಷ್ಟೇನೇ

7 ಸೆಪ್ಟೆಂ

‘ಪಂಚರಂಗಿ’ ಎಂಬ ಆಧುನಿಕ ಚಿತ್ರದ ಸಮಕಾಲೀನ ಜನಪದ ಗೀತೆಯಾಗಿ ಹೋಗಿರುವ ‘ಲೈಫು ಇಷ್ಟೇನೇ…’ ಸ್ಪೂರ್ತಿಯಲ್ಲಿ ನಾವು ಆಧುನಿಕ ಸಮಕಾಲೀನ ಗಂಡಂದಿರ ಅಂತರಂಗದ

ರಾಮಾನುಜಂ.ಎಂ.ಕೆ

ನಗಾರಿಯ ಮಿಡಿತಗಳನ್ನು-ಬಡಿತಗಳನ್ನು ಗ್ರಹಿಸಿಕೊಂಡು ಅವಕ್ಕೆ ಪರೋಡಿ ಗೀತೆಯ ರೂಪವನ್ನು ನೀಡಿದೆವು.

ಈ ಗೀತೆಯನ್ನು ಓದಿ ನಮ್ಮ ಲೈಫು-ವೈಫು ಯಾವ ಮಟ್ಟಿಗೆ ಕೋಪಾವಿಷ್ಟರಾಗಿದ್ದಾರೆಂದರೆ ತಿಂಡಿಯ ಸಮಯದಲ್ಲಿ ತಟ್ಟೆಯಲ್ಲಿ ಎರಡು ಸೌತೆಕಾಯಿ ಬಿಲ್ಲೆ, ಒಂದು ಬಟಾಣಿ ಇಟ್ಟು ತಿಂಡಿ ಇಷ್ಟೇನೇ ಎನ್ನುತ್ತಾರೆ. ಕಾಫಿ ಬಟ್ಟಲಲ್ಲಿ ನೀರು ತುಂಬಿಕೊಟ್ಟು ಕಾಫಿ ಇಷ್ಟೇನೇ ಎನ್ನುತ್ತಿದ್ದಾರೆ. ಇನ್ನು ರಾತ್ರಿ ಮಲಗುವ ಪಾಡನ್ನು ಹೇಳದಿದ್ದರೆ ವಾಸಿ!

ಹೀಗೆ ನಾವೇ ತೋಡಿದ ಗುಂಡಿಗೆ ನಾವೇ ಬೀಳುವುದು ಎನ್ನುವ ಗಾದೆಯ ಆಧುನಿಕ ಅರ್ಥಾಂಥರವನ್ನು ಅನುಭವವೇದ್ಯಗೊಳಿಸಿಕೊಳ್ಳುತ್ತ ನಾವು ಕುಚೇಲನ ಕೈಲಿ ಕಾಫಿ ಮಾಡಿಸಿಕೊಂಡು ಕುಡಿಯುತ್ತ ವೇದನೆಯನ್ನು ಶಮನ ಮಾಡಿಕೊಳ್ಳುವಾಗ ಈ ಸುದ್ದಿ ನಮ್ಮ ಎರಡು ಕಿವಿಗಳನ್ನು ತಲುಪಿತು.

ಬಜ್ ನಲ್ಲಿ ನಮ್ಮ ಗೀತೆಯನ್ನು ಓದಿ ಮೆಚ್ಚಿಕೊಂಡ ರಾಮಾನುಜಂ.ಎಂ.ಕೆಯವರು ಅದಕ್ಕೆ ಸಂಗೀತ ಸಂಯೋಜನೆ ಮಾಡಿ ಹಾಡಿಯೂ ಬಿಟ್ಟಿದ್ದಾರೆ. ಹಾಡು ಕೇಳುವುದಕ್ಕೆ, ಡೌನ್ ಲೋಡ್ ಮಾಡುವುದಕ್ಕೆ ಇಲ್ಲಿ ಕ್ಲಿಕ್ಕಿಸಿ.

ರಾಮಾನುಜಂ ರಿಗೆ ನಗಾರಿಯ ಪರವಾಗಿ ಥ್ಯಾಂಕ್ಸ್ ಹೇಳುತ್ತ ಇನ್ನು ಮುಂದೆ ಈ ಹಾಡು ಗಂಡಂದಿರ ರಿಂಗ್ ಟೋನ್ ಆಗಿ ಹೋದರೆ ನಾವಾಗಲಿ ಆಧುನಿಕ ಗಂಡಂದಿರ ಶೋಕ ಗೀತೆ ‘ಕವಲು’ ಕತೃವೂ ಜವಾಬ್ದಾರರಲ್ಲ ಎಂದು ಈಗಲೇ ಹೆಮ್ಮಕ್ಕಳಿಗೆ ಸ್ಪಷ್ಟಪಡಿಸುತ್ತಿದ್ದೇವೆ.

ಭೋಗರಾಜ ಶೆಟ್ಟರ ಸಂದರ್ಶನ ಅತೀ ಶೀಘ್ರದಲ್ಲಿ…

4 ಸೆಪ್ಟೆಂ

 

ಮಚ್ಚು ಲಾಂಗು ರೇಜರುಗಳ ಸತ್ಸಂಪ್ರದಾಯವನ್ನು ನೆಚ್ಚಿಕೊಂಡು, ಕುರ್ಪು, ಗುನ್ನ, ಡಿಚ್ಚಿಗಳೆಂಬ ದೈವೀ ಪ್ರಭಾವಳಿಯಿಂದ ಸನ್ನಡತೆಯನ್ನು ಕಾಪಾಡಿಕೊಂಡು ಕರುಣಾಜನಕ, ಕರುಳು ಬೇಧಕ ಭಾವುಕ ಪರಂಪರೆಯನ್ನು ಪೊರೆಯುತ್ತಾ ನೆಮ್ಮದಿಯಾಗಿದ್ದ ಕನ್ನಡ ಚಿತ್ರರಂಗಕ್ಕೆ ಹೊತ್ತಲ್ಲದ ಹೊತ್ತಿನಲ್ಲಿ ಮುಂಗಾರು ಹೊಡೆಸಿ ನೆಗಡಿ ಹತ್ತಿಸಿ, ಸಿಂಬಳ ಸುರಿಸುವಂತೆ ಮಾಡಿದ್ದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಭೋಗರಾಜ ಶೆಟ್ಟರು.

ಸತತ ಮೂರು ಚಿತ್ರಗಳಲ್ಲಿ ಭರ್ಜರಿ ಯಶಸ್ಸನ್ನು ಕಂಡು ಪ್ರಾಯೋಜಕರಾದ ಕಂಪೆನಿಗಳಿಗಿಂತ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡ ಶೆಟ್ಟರು ಪೆನ್ನು ಹಿಡಿದುಕೊಂಡರೂ, ಮೈಕು ಹಿಡಿದುಕೊಂಡರೂ, ಇನ್ಯಾರದೂ ಕೈಯಿ ಹಿಡಿದುಕೊಂಡರೂ, ತಮ್ಮದೇ ತಲೆ ಹಿಡಿದುಕೊಂಡರೂ ಮಾಧ್ಯಮಗಳಿಗೆ ಎದ್ದು ಬಿದ್ದು ವರದಿ ಮಾಡಬಹುದಾದ ಸುದ್ದಿ.

ಭೋಗರಾಜ ಶೆಟ್ಟರು ತಮ್ಮ ಸಿನೆಮಾಗಳ ಬಗ್ಗೆ ಎಲ್ಲೂ ಹೆಚ್ಚಾಗಿ ಮಾತನಾಡುವುದಿಲ್ಲ ಎಂದು ಅನೇಕ ಟಿವಿ ಸಂದರ್ಶನಗಳಲ್ಲಿ ತಮ್ಮ ಸಿನೆಮಾವನ್ನು ಪ್ರಮೋಟ್ ಮಾಡುತ್ತಾ ಮಾತನಾಡಿದ್ದಾರೆ. ತಮ್ಮ ಸಿನೆಮಾ ಬದುಕಿನ ಜೊತೆಗೆ ತಮ್ಮ ಸಾಹಿತ್ಯಿಕ ಲೋಕದ ಬಗ್ಗೆಯೂ ಸಂದರ್ಶನಗಳಲ್ಲಿ ಮನಬಿಚ್ಚಿ, ರೆಕ್ಕೆ ಬಿಚ್ಚಿ ಮಾತನಾಡಿದ್ದಾರೆ. ಅವರು ರೆಕ್ಕೆ ಬಿಚ್ಚಿ ಮಾತನಾಡುವ ಕಾರಣಕ್ಕೇ ಅವರು ಪ್ರಶ್ನೆಗಳಿಗೆ ಹಾರಿ ಹಾರಿ ಹಾರಿಕೆಯ ಉತ್ತರ ನೀಡುತ್ತಾರೆ yogarajbhaಎನ್ನುವ ಪ್ರಶಂಸೆಗೆ ವಿನಾಕಾರಣ ಗುರಿಯಾಗಿದ್ದಾರೆ.

ಈ ಹಾರು ಹಕ್ಕಿಯ ಜೊತೆಗೆ ಅಭೂತಪೂರ್ವವಾದ ಸಂದರ್ಶನವೊಂದನ್ನು ಮಾಡಬೇಕೆಂದು ಹಾರಿಕೆಯ ತಜ್ಞರಾದ ಸಾಮ್ರಾಟರಲ್ಲಿ ಕೋರಿಕೆ ಸಲ್ಲಿಸಲಾಯ್ತು. ಕೂಡಲೇ ಸಾಮ್ರಾಟರು ತಮ್ಮಾಪ್ತ ಚೇಲ ಕುಚೇಲನಿಗೆ ಕರೆ ಕಳುಹಿಸಿದರು. ನಾರ್ಕೋ ಲೆಪ್ಸಿಯಿಂದಾಗಿ ಕಂಡ ಕಂಡಲ್ಲಿ, ಕಂಡವರ ಸಂಗಡ ಮಲಗಲು ಶುರುಮಾಡಿದ್ದ ತಮ್ಮ ಆಲ್ಟರ್ ಈಗೋವನ್ನು ಇಗೋ ಇಗಲೇ ಎಳೆದು ತಾ ಎಂದು ಆಜ್ಞಾಪಿಸಿದರು.

ತಮ್ಮ ಬೆನ್ನ ಹಿಂದೆ ತೂಕಡಿಸುತ್ತ ನಿಂತ ಆಲ್ಟರ್ ಈಗೋವನ್ನು ಎಚ್ಚರಿಸಿ ಭೋಗರಾಜ ಶೆಟ್ಟರ ಸಂ-ದರ್ಶನವನ್ನು ಮಾಡಿಕೊಂಡು ಬರಲಿಕ್ಕೆ ಅಟ್ಟಿದರು. ಮಂದ್ರ ಸ್ವರದಲ್ಲಿ ಆಲ್ಟರ್ ಈಗೋ

ಇಂಟ್ರ್ಯು ಮಾಡಿ ಪುಣ್ಯ ಕಟ್ಕೊ

ಯೋಚ್ನೆ ಮಾಡಿ ಗಡ್ಡ ಸುಟ್ಕೊ

ಉತ್ರ ಸಿಗದೆ ಇರುವೆ ಬಿಟ್ಕೊ

ಲೈಫು ಇಷ್ಟೇನೇ…

ಎಂದು ಹಾಡಿಕೊಳ್ಳುತ್ತಾ ಸಂದರ್ಶನಕ್ಕೆ ಮುಂದಾಯಿತು.

ಶೀಘ್ರದಲ್ಲಿ ನಿರೀಕ್ಷಿಸಿ ಭರ್ಜರಿ ನಿರ್ದೇಶಕ ಭೋಗರಾಜ ಶೆಟ್ಟರ ಸಂದರ್ಶನ: ನಗಾರಿಯಲ್ಲಿ ಮಾತ್ರ!

ಅವರಿವರ ಭಯಾಗ್ರಫಿ

3 ಸೆಪ್ಟೆಂ

 

ಖ್ಯಾತರ, ಹೆಸರುವಾಸಿಯಾದ ಮಂದಿಯ ಬದುಕು ವರ್ಣರಂಜಿತವಾದದ್ದು. ಅಂತಹ ವ್ಯಕ್ತಿಗಳ ಜೀವನದಲ್ಲಿ ನಡೆದ ರಸಪ್ರಸಂಗಗಳನ್ನು ಕಲೆ ಹಾಕುವ ಪುಟ ”ಅವರಿವರ ಭಯಾಗ್ರಫಿ”. ನೀವು ಓದಿದ, ನಿಮ್ಮ ಗಮನಕ್ಕೆ ಬಂದ, ನಿಮ್ಮ ಸಂಗ್ರಹದಲ್ಲಿರುವ ಪ್ರಸಂಗಗಳನ್ನು ಕಳುಹಿಸಿಕೊಡಲು ಸಂಪರ್ಕಿಸಿ (nagesamrat[at]gmail[dot]com).

ಈ ಸಂಚಿಕೆಯ ಸ್ಯಾಂಪಲ್:

ಸುಧಾರಣೆ

 

ಅಮೇರಿಕಾ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅಧಿಕಾರವಧಿಯ ಉತ್ತರಾರ್ಧ ಆರ್ಥಿಕ ಹಿಂಜರಿತದಿಂದ ಪೀಡಿತವಾಗಿತ್ತು. ರೊನಾಲ್ಡ್ ರೇಗನ್ ಅಧ್ಯಕ್ಷರಾಗುವವರೆಗೆ ಅಮೇರಿಕಾದ ಆರ್ಥಿಕತೆ ಸುಧಾರಿಸಲೇ ಇಲ್ಲ.

 

“ನೀವು ಕೆಲಸ ಕಳೆದುಕೊಂದರೆ ಅದು ಆರ್ಥಿಕ ಕುಸಿತ.” ಅಧಿಕಾರ ಸ್ವೀಕರಿಸಿ ರೇಗನ್ ಮಾತನಾಡಿದರು, “ನಿಮ್ಮ ನೆರೆಯ ಮನೆಯವನು ಕೆಲಸ ಕಳೆದುಕೊಂಡರೆ ಅದು ಆರ್ಥಿಕ ಹಿಂಜರಿತ.”

 

ಮತ್ತೆ ಸುಧಾರಣೆ? “ಜಿಮ್ಮಿ ಕಾರ್ಟರ್ ಕೆಲಸ ಕಳೆದುಕೊಂಡರೆ ಅದು ಸುಧಾರಣೆ!”

 

 

 

ನಗೆಚಿತ್ರಗಳು

20 ಆಗಸ್ಟ್

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ ಪುಟ ‘ನಗೆ ಚಿತ್ರ’

ಈ ಸಂಚಿಕೆ ಸ್ಯಾಂಪಲ್

ಕಡೆಗೂ ಮೆಕ್ ಡೊನಾಲ್ಡ್ಸ್ ಆಫ್ರಿಕಾ ತಲುಪಿತು!