ತೊಣಚಪ್ಪನ ಡೈರಿ

9 ಫೆಬ್ರ

ಸಿಎಂ ಪತ್ನಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ: ಬಂಗಾರಪ್ಪ

ಮಾಡಬೇಕಾದ ತನಿಖೆಗಳನ್ನು ಪೂರೈಸುವುದಕ್ಕೇ ಸಿಬಿಐಗೆ ಸಮಯ ಸಾಲುತ್ತಿಲ್ಲ ಹೀಗಿರುವಾಗ ನಮ್ಮ ನಾಡಿನ ಮೆಚ್ಚಿನ ನಾಯಕರ ಹೆಂಡತಿಯರ ಸಾವು, ಹೆಂಡತಿಯರ ಸಂಖ್ಯೆ, ಅಧಿಕೃತ – ಅನಧಿಕೃತ ಕುಟುಂಬಗಳ ತನಿಖೆಯನ್ನು ಅವರಿಗೆ ಹೊರಿಸಿದರೆ ಅವನ್ನು ಮುಗಿಸುವುದು ಈ ಸೌರಮಂಡಲ ಕರಗಿದ ಮೇಲೆಯೇ! ಹೀಗಾಗಿ ನಾನು ವೈಯಕ್ತಿಕವಾಗಿ ನಮ್ಮ ನಾಡಿನ ಪ್ರಜ್ಞಾವಂತರನ್ನು ಕೇಳಿಕೊಳ್ತೇನೆ, ನಮ್ ಸಾಮ್ರಾಟನ ಚೇಲ ಕುಚೇಲನಿಗೆ ಈ ತನಿಖೆಗಳನ್ನು ವಹಿಸಿ. ಕೆಲ್ಸ ಇಲ್ದೆ ನೊಣ ಹೊಡೀತ ‘ಕೀಟ ದಯಾ ಸಂಘ’ದವರ ಕೆಂಗಣ್ಣಿಗೆ ಆತ ಗುರಿಯಾಗೋದನ್ನ ತಪ್ಸಿ.

ರಂಗಸ್ಥಳದಲ್ಲೇ ಪ್ರಾಣ ಬಿಡುವುದು ಕಲಾವಿದ ಶಂಭು ಹೆಗಡೆಯವರ ಇಚ್ಛೆಯಾಗಿತ್ತು: ವರದಿ

ಇದೇ ಆಸೆ ನಮ್ ರಾಜಕೀಯ ನಾಯಕ್ರುಗಳಿಗೆ ಬಂದ್ರೆ ಎಷ್ಟ್ ಚಂದವೋ! ಭಾಷಣ ಬಿಗಿಯುವಾಗ್ಲೇ ಪ್ರಾಣ ಬಿಡೋ ಹಂಗೇನಾದ್ರೂ ಆದ್ರೆ ಈ ದೇಶ್ದ ನಾಸ್ತಿಕ್ರೆಲ್ಲ ಹೋಲ್ಸೇಲಾಗಿ ದೇವ್ರಿಗೆ ಅಡ್ಡ ಬೀಳ್ತಾರೆ!

ಮಾಧ್ಯಮಗಳಿಗೆ ಅಂಕುಶ ಹಾಕಲು ಆಚಾರ್ಯ ಚಿಂತನೆ- ವರದಿ

ನಮ್ ನ್ಯೂಸ್ ಚಾನಲ್ಲು, ಪೇಪರುಗಳ್ನ ಹ್ಯಾಂಡ್ಲ್ ಮಾಡೋಕೆ ಕ್ಲಾಸಲ್ಲಿ ಮಾನಿಟರ್ ಇದ್ಧಂಗೆ ಒಬ್ಬ ಒಂಬುಡ್ಸ್ ಮನ್ (ಮಾಧ್ಯಮ ಧರ್ಮಾಧಿಕಾರಿ)ಯನ್ನು ನೇಮಿಸುವ ಆಲೋಚ್ನೆ ಮಾಡ್ತಿದಾರಂತೆ ನಮ್ ಗೃಹ ಮಂತ್ರಿಗಳು. ಈ ಸಂದರ್ಭದಲ್ಲಿ ಮೊದ್ಲು ರಾಜ್ಯದಾಗೆ ಗಲಾಟೆ ಗದ್ಲ ತಪ್ಸೋ ಒಳ್ಳೆ ಅಧಿಕಾರಿ ನೇಮಕ ಆಗ್ಬೇಕು ಅಂತ ವಿರೋಧ ಪಕ್ಷದೋರಂಗೆ ವಾದ ಮಾಡೋದು ಬಿಟ್ಟು ನಮ್ ನಗೆ ಸಾಮ್ರಾಟ್ರನ್ನ ಒಂಬುಡ್ಸ್ ಮನ್ ಹುದ್ದೆಗೆ ಶಿಫಾರಸ್ಸು ಮಾಡ್ರಿ. ಹಂಗಾದ್ರೂ ಅವ್ರನ್ನ ನಗೆ ನಗಾರಿಯಿಂದ ಒದ್ದೋಡ್ಸೋಕೆ ಸಾಧ್ಯವಾಗುತ್ತೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: