ಕನ್ನಡದ ಬ್ಲಾಗುಗಳ ಲೋಕದಲ್ಲಿ ವಿಡಂಬನೆ, ಫೇಕ್ ನ್ಯೂಸ್, ಕಾಲೆಳೆಯುವಿಕೆ, ನವಿರಾದ ಹಾಸ್ಯ, ವಕ್ರತುಂಡೊಕ್ತಿ ಯಾವುದಕ್ಕೂ ಕೊರತೆಯಿಲ್ಲ. ವಾರಕ್ಕೊಂದು ಬಾರಿ ಕನ್ನಡದ ಬ್ಲಾಗು ತೋಟವನ್ನು ಹೊಕ್ಕು ಅಲ್ಲಿನ ರಸವತ್ತಾದ ಬರಹಗಳನ್ನು ಹೆಕ್ಕಿ ತಂದು ಪಟ್ಟಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ ನಗೆಸಾಮ್ರಾಟ್. ಇವರ ಬ್ಲಾಗ್ ಬೀಟ್ಗೆ ನಿಮ್ಮ ಬ್ಲಾಗೂ ಈಡಾಗಬೇಕೆಂಬ ಆಸೆಯಿದ್ದರೆ ನಿಮ್ಮ ಬ್ಲಾಗಿನ ವಿಳಾಸ ಕೊಟ್ಟು ನಮ್ಮ ವಿಳಾಸಕ್ಕೆ ಒಂದು ಮಿಂಚಂಚೆ ಕಳುಹಿಸಿ.
[ಬೀಟು ಹಾಕಲು ಹೋದ ಸಾಮ್ರಾಟರಿಗೆ ಈ ಬಾರಿ ಜನರು ತುಂಬಾ ಗಂಭೀರವಾಗಿದ್ದಾರೆ ಎಂದು ಗಾಬರಿಯಾಯ್ತು. ಬಹುಮಂದಿ ಮಾಧ್ಯಮವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ, ಕೆಲವರು ಬಾಂಬುಗಳ ಬಗ್ಗೆ ಬರೆಯುತ್ತಿದ್ದಾರೆ, ಸ್ವಾತಂತ್ರ ದಿನಾಚರಣೆಯ ಸಂಭ್ರಮವನ್ನು ಗಂಭೀರವಾಗಿ ಆಚರಿಸುತ್ತಿದ್ದಾರೆ. ಹೀಗಾಗಿ ನಗಾರಿಯ ಬೀಟಿಗೆ ಸಿಕ್ಕಿದ್ದು ಇಷ್ಟೇ]
ಮಜಾವಾಣಿ
ಕರ್ನಾಟಕದಲ್ಲಿ ರೈತನೋರ್ವ ತನ್ನ ತೊಂಭತ್ತೆಂಟನೆಯ ವಯಸ್ಸಿನಲ್ಲಿ ನೈಸರ್ಗಿಕ ಸಾವಿನಿಂದ ಸತ್ತಿದ್ದು ರಾಜ್ಯದಲ್ಲಿ ತೀವ್ರವಾದ ಸಂಚಲನವನ್ನು ಹುಟ್ಟು ಹಾಕಿದೆ. ಮುಖ್ಯ ಮಂತ್ರಿಗಳು ನಮ್ಮ ರಾಜ್ಯದಲ್ಲಿ ನೈಸರ್ಗಿಕ ಸಾವು ಬಂದು ಸಾಯುವ ರೈತರೂ ಇದ್ದಾರೆ ಎಂದು ಖುಶಿಯಾಗಿದ್ದಾರಂತೆ ಎಂದು ವರದಿ ಮಾಡಿದೆ ‘ಮಜಾವಾಣಿ’ ಪತ್ರಿಕೆ.
ಬೊಗಳೆ ರಗಳೆ
ಸ್ವಾತಂತ್ರ್ಯ ದಿನಾಚರಣೆಯ ದಿನ ಅನೇಕಾನೇಕರು ಸ್ವತಂತ್ರವಾಗಿ ಕನಸು ಕಾಣುತ್ತಾರೆ. ಹಾಗೆಯೇ ನಮ್ಮ ಬೊಗಳೆ ಸೊಂಪಾದಕರು ದೇಶದ ಪ್ರಧಾನಿಯಾದಂತೆ ಕನಸು ಕಂಡಿದ್ದಾರೆ. ಆದರೆ ಇದು ನಮ್ಮ ನಿಮ್ಮಂತೆ ಕೇವಲ ಅಸ್ಪಷ್ಟ ಕನಸಲ್ಲ. ಪ್ರಧಾನಿಯಾದ ಯಶೋಗಾಥೆಯೇ ಕನಸಿನಲ್ಲಿ ಮೂಡಿಬಂದಿದೆ.
ಈ ದೇಶವನ್ನು ಕಾಪಾಡಲು ಆ ದೇವರಿಂದಲೇ ಸಾಧ್ಯವಿಲ್ಲ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದನ್ನು ವರದಿ ಮಾಡಿರುವ ಬೊಗಳೆ ಆ ಹೇಳಿಕೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಿದೆ.
ಕೆಂಡಸಂಪಿಗೆಯ ಸುದ್ದಿ ಕ್ಯಾತ
‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಅನ್ನೋ ಮಾತಿದೆ. ಕೇವಲ ಮಾತಾಡುವುದು ಮಾತ್ರ ಅಲ್ಲ ಅರ್ಥವಾಗದ ಹಾಗೇ ಮಾತನಾಡಿದರೆ ಎಂತೆಂಥ ಅನಾಹುತ ಆದೀತು, ದಂಡ ತೆರಬೇಕಾದೀತು ಅನ್ನುತ್ತಾನೆ ಸುದ್ದಿ ಕ್ಯಾತ ಯಾಕೆ ಅಂತ ತಿಳೀಬೇಕಾ? ಈ ಕ್ಯಾತೆ ಓದಿ.
ನಿಮ್ಮದೊಂದು ಉತ್ತರ