ನಗೆ ನಗಾರಿಯ ವಿಶಾಲ ಸಾಮ್ರಾಜ್ಯದ ವಿಶಾಲ ಹೃದಯಿ ಪ್ರಜೆಗಳೆ, ಇಷ್ಟು ದಿನ ಸಾಮ್ರಾಟರು ಅವಿರತವಾಗಿ ತಮ್ಮ ಸಾಮ್ರಾಜ್ಯದ ಒಳಿತಿಗಾಗಿ ದುಡಿದಿದ್ದಾರೆ, ದಣಿದಿದ್ದಾರೆ. ನಮ್ಮ ದೇಶದ ಬೆನ್ನುಬು ರೈತನಾದರೆ,
ಮೆದುಳು ವಿಜ್ಞಾನಿಯಾದರೆ, ಪೃಷ್ಠ ರಾಜಕಾರಣಿಗಳೇ ಆಗಿರುತ್ತಾರೆ ಎಂಬುದು ಸಾಮಾನ್ಯ ಜ್ಞಾನ.
ಇಂತಹ ರಾಜಕಾರಣಿ ಮಿತ್ರನೊಬ್ಬನ ಆಹ್ವಾನದ ಮೇರೆಗೆ ನಾವು ವಿದೇಶ ಪ್ರಯಾಣವನ್ನು ಕೈಗೊಳ್ಳುತ್ತಿದ್ದೇವೆ. ವಿದೇಶಗಳನ್ನು ಸುತ್ತಾಡಿಕೊಂಡು ನಮ್ಮ ಗೆಳೆಯನ ಆರೋಗ್ಯ ತಪಾಸಣೆ ಆತನ ಪತ್ನಿಯ ಶಾಂಪಿಂಗ್ ಭರಾಟೆಯನ್ನು ತೀರಿಸಿಕೊಂಡು ನಾವು ಒಂದು ತಿಂಗಳು ಕಳೆದು ನಮ್ಮ ಸಾಮ್ರಾಜ್ಯಕ್ಕೆ ಹಿಂದಿರುಗುತ್ತೇವೆ.
ನಮ್ಮ ಪತ್ರಿಕೆಯಲ್ಲಿ ಸ್ಥಾನಿಕ ಸಂಪಾದಕ, ಆಸ್ಥಾನಿಕ ಸಂಪಾದಕ ಎಂದೆಲ್ಲ ಬೇಧ ಭಾವವಿಲ್ಲದಿರುವುದರಿಂದ ನಾವಿಲ್ಲದ ವೇಳೆಯಲ್ಲಿ ಪತ್ರಿಕೆಯ ಜವಾಬ್ದಾರಿ ಹೊರಲು ಒಂದು ನೊಣವೂ ಇರುವುದಿಲ್ಲ.
ನಮ್ಮ ಈ ಅನುಪಸ್ಥಿತಿಯಿಂದಾಗಿ ಅನೇಕ ಸುಂದರ ಮುಗ್ಧ ಎಳಯ ಹೃದಯಗಳು ವಿರಹ ವೇದನೆಯಿಂದ ನರಳುತ್ತವೆಂಬುದು ನಮಗೆ ತಿಳಿದಿದೆ. ವಿಧಿ ಬರಹವನ್ನು ನಾಡಿನ ಜನಪ್ರಿಯ ಬರಹಗಾರದ ನಾವೂ ಸಹ ತಿದ್ದಲಾಗುವುದಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಎಲ್ಲರಿಗೂ ಆ ಭಗವಂತ ಶಕ್ತಿಯನ್ನು ಕರುಣಿಸಲಿ.
ಪ್ರೀತಿಯಿಂದ
ನಗೆ ಸಾಮ್ರಾಟ್
Posted by avinash udupa on July 12, 2009 at 4:53 am
bahala uttamavada prayatna idu,bahala santosha aayitu kannada ankana nodi
Posted by Nage samrat on July 15, 2009 at 11:35 am
ಯಾವುದು ಸಾರ್ ಉತ್ತಮ ಪ್ರಯತ್ನ? ನಮ್ಮ ಬ್ಲಾಗೇ ಅಥವಾ ಬಿಟ್ಟಿ ವಿದೇಶ ಪ್ರಯಾಣವೇ?
- ನಗೆ ಸಾಮ್ರಾಟ್