ನಿಜವಾದ ಕೋಡಿ ಹಳ್ಳಿ ಸ್ವಾಮಿ ಭವಿಷ್ಯ!

(ನಗೆ ನಗಾರಿ ಭವಿಷ್ಯವಾಣಿ ಮಹಾನ್ವೇಷಣಾ ಬ್ಯೂರೋ)

ಮಾಧ್ಯಮದವರ ಬೇಜವಬ್ದಾರಿತನದ ಬಗ್ಗೆ ಪುಟಗಟ್ಟಲೆ ಕೊರೆದು ಸುಸ್ತಾಗಿರುವ ನಮಗೆ ಇನ್ನಷ್ಟು ಭಾಷಣ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವಾಗಿದೆ.  ಸುದ್ದಿಯೆಂಬುದು ಕರ್ನಾಟಕದ ಕಗ್ಗತ್ತಲ ಮೂಲೆಯಲ್ಲಿ ಕಪ್ಪು ಕಂಬಳಿ ಹೊದ್ದು ಅಡಗಿ ಕುಳಿತಿದ್ದರೂ ಪತ್ತೆ ಹಚ್ಚಿ, ಹಿಡಿದು ತಂದು, ಬಣ್ಣ ಬಳಿದು, ಪೋಷಾಕು ತೊಡಿಸಿ ವರದಿ ಮಾಡುವ, ಆಮೂಲಕ ಉತ್ತಮ ಸಮಾಜ ಕಟ್ಟಲು ಶ್ರಮಿಸುವ ಚಾನಲ್ಲು, ನಿರಂತರವಾಗಿ ನೇರವಾದ ವರದಿಯನ್ನು ದಿಟ್ಟವಾಗಿ ಪ್ರಕಟಿಸುವ ಛಲ ಹೊತ್ತ ಚಾನಲ್ಲುಗಳು, ನಂಬರ್ ಒನ್, ಟೂ, ಥ್ರೀ ಪತ್ರಿಕೆಗಳು ಈ ಬಗೆಯ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿರುವುದನ್ನು ಕಂಡು ನಾವು ಕೆಂಡಾ ಮಂಡಲರಾಗಿದ್ದೇವೆ. ಸುದ್ದಿಯನ್ನು ವರದಿ ಮಾಡುವುದಷ್ಟೇ ಪತ್ರಕರ್ತನ ಕೆಲಸವಲ್ಲ, ಆ ಸುದ್ದಿಯ ಬೆಳವಣಿಗೆ, ಅದರ ಪರಿಣಾಮಗಳನ್ನು ತಾಳ್ಮೆಯಿಂದ ಗಮನಿಸಿ ಓದುಗರಿಗೆ ಮುಟ್ಟಿಸಬೇಕಾದ್ದು ಆತನ ಕರ್ತವ್ಯ. ಆದರೆ ಈ ಕರ್ತವ್ಯವನ್ನು ಮರೆತು ಮಾಧ್ಯಮಗಳು ಉತ್ತಮ ಸಮಾಜ ಕಟ್ಟಲು ಹೊರಟಿವೆ.

ನಮ್ಮ ಪ್ರಭಾವಿ ಮುಖ್ಯಧಾರೆಯ ಮಾಧ್ಯಮಗಳು ಎಡವಿದ ಕಲ್ಲನ್ನೇ ಕರ್ತಾರನ ಕಮ್ಮಟ ಎಂದು ಭಾವಿಸಿ ಕೆಲಸಕ್ಕೆ ತೊಡಗುವ ನಗೆ ನಗಾರಿ ಡಾಟ್ ಕಾಮ್ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಲು ಮತ್ತೊಮ್ಮೆ ತನ್ನ ಸಮಸ್ತ ಶಕ್ತಿಯನ್ನೂ ವಿನಿಯೋಗಿಸಿದೆ.

ಚುನಾವಣೆಗಳ ಮುನ್ನ ಯಾರು ಎಷ್ಟು ಸೀಟು ಗೆಲ್ಲಬಹುದು, ಯಾರು ಕುರ್ಚಿಯೇರಬಹುದು ಎಂದೆಲ್ಲಾ ರಾಜಕೀಯ ಪಂಡಿತರು ಹಾಗೂ ಟಿವಿ ನಿರೂಪಕರು ಹಗಲು ರಾತ್ರಿ ಗಂಟಲು ಹರಿದುಕೊಳ್ಳುವುದು ಸಾಮಾನ್ಯ. ಏಕೆಂದರೆ ಅದು ಅವರ ವೃತ್ತಿ, ಹೊಟ್ಟೆ ಪಾಡು. ವೃತ್ತಿ ಅಥವಾ ಹೊಟ್ಟೆ ಪಾಡು ನಿರ್ವಹಿಸಲು ಯಾವುದೇ ಪ್ರತಿಭೆ, ಅಧ್ಯಯನ, ಜವಾಬ್ದಾರಿ, ತಜ್ಞತೆ ಇರಬೇಕು ಎಂದೇನು ಕಾನೂನು ಇಲ್ಲ. ಅವರು ಬಾಯಿಗೆ ಬಂದ, ತಲೆಗೆ ತೋಚಿದ ವಿಶ್ಲೇಷಣೆ ಮಾಡಿದರೂ, ತಲೆ ಬುಡವಿಲ್ಲದ ಭವಿಷ್ಯವಾಣಿಯನ್ನು ಅರುಹಿದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬುದ್ಧಿವಂತ ವೀಕ್ಷಕರಿಗೆ ಅನ್ನಿಸುವುದಿಲ್ಲ.

ಆದರೆ ಹೊಟ್ಟೆ ಪಾಡಿನ ಹಂಗಿಲ್ಲದೆ, ವೃತ್ತಿಯನ್ನು ನಿರ್ವಹಿಸಬೇಕಾದ ಅನಿವಾರ್ಯತೆಯಿಲ್ಲದೆ ಈ ಬಗೆಯ ಭವಿಷ್ಯವಾಣಿಯನ್ನು ಉದ್ಘೋಷಿಸುವ ಹವ್ಯಾಸಿ ತಜ್ಞರ ಪ್ರಯತ್ನವನ್ನು ಮಾತ್ರ ಅಸಡ್ಡೆಯಿಂದ ಕಾಣಬಾರದು. ಅವರ ಕೊಡುಗೆಯನ್ನು ಭಾರಿ ಗೌರವಾದರಗಳಿಂದ ನೆನೆಸಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ.

ಈ ಸಾಲಿನ ಲೋಕಸಭಾ ಚುನಾವಣೆಗಳ ಮುಂಚೆ ರಾಜಕೀಯ ಏರುಪೇರುಗಳ ಬಗ್ಗೆ ಅತ್ಯಂತ ನಿಖರವಾಗಿ ಭವಿಷ್ಯ ನುಡಿದಿದ್ದ ಕೋಡಿ ಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿಯವರ ಹೇಳಿಕೆಗಳನ್ನು ನೆನೆಸಿಕೊಳ್ಳೋಣ.

svami

 

ಯಡಿಯೂರಪ್ಪ ಅಧಿಕಾರಕ್ಕೆ ಕುತ್ತು: ಕೋಡಿಮಠ ಶ್ರೀ ಭವಿಷ್ಯ

ಹಾಸನ, ಸೋಮವಾರ, 11 ಮೇ 2009( 10:51 IST )

NRB

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ 15 ದಿನಗಳೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಕ್ಕೆ ಕುತ್ತು ಬರಲಿದೆ. ಒಂದು ವೇಳೆ ತಕ್ಷಣಕ್ಕೆ ಅಪಾಯದಿಂದ ಪಾರಾದರೂ ಡಿಸೆಂಬರ್‌‌ನಲ್ಲಿ ಎದುರಾಗುವ ರಾಜಕೀಯ ಗಂಡಾಂತರದಿಂದ ಯಡಿಯೂರಪ್ಪ ಪಾರಾಗಲು ಸಾಧ್ಯವೇ ಇಲ್ಲ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ಏರಿದ ದಿನದಿಂದಲೂ ರಾಜ್ಯದಲ್ಲಿ ಅವಘಡ, ಗಲಾಟೆ, ಸಾವುಗಳು ನಿರಂತರವಾಗಿ ಸಂಭವಿಸುತ್ತಿವೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಘಳಿಗೆಯೇ ಸರಿಯಿಲ್ಲ. ಗಂಡಾಂತರದಿಂದ ಅವರು ಪಾರಾಗಬೇಕಿದ್ದರೆ ಮುಖ್ಯಮಂತ್ರಿಯಾದ 45 ದಿನಗಳಲ್ಲಿ ರಾಜೀನಾಮೆ ನೀಡಿ ಮತ್ತೆ ಅಧಿಕಾರ ಸ್ವೀಕರಿಸಬೇಕಿತ್ತು. ಆ ಕೆಲಸ ಮಾಡಿದ್ದರೆ 10 ವರ್ಷ ಅನಭಿಷಿಕ್ತ ದೊರೆಯಂತಿರಬಹುದಿತ್ತು. ಈಗ ಯಾವ ಶಾಂತಿ ಮಾಡಿಸಿದರೂ ಗಂಡಾಂತರದಿಂದ ಪಾರಾಗಲು ಸಾಧ್ಯವಾಗದು ಎಂದು ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು ಪ್ರಬಲವಾಗಲಿದೆ. ರಾಜ್ಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆಯಿದೆ ಎಂದರು.

 

ಸ್ವಾಮೀಜಿಯವರ ಭವಿಷ್ಯವಾಣಿಯನ್ನು ವರದಿ ಮಾಡುವಲ್ಲಿ ಪತ್ರಿಕೆಗಳು ತೋರಿದ ಶ್ರದ್ಧೆಯನ್ನು ಅವರ ಭವಿಷ್ಯವಾಣಿ ನಿಖರವೆಂದು ಸಾಬೀತಾದಾಗ ಅದನ್ನು ನೆನಯುವಲ್ಲಿ ತೋರಲು ಮರೆತರು. ಅತ್ಯಂತ ನಿಖರವಾಗಿ ಫಲಿತಾಂಶವನ್ನು ನಿರೀಕ್ಷಿಸಿದ್ದಕ್ಕೆ ಸ್ವಾಮೀಜಿಯವರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ತಮ್ಮ ತ್ರಿಕಾಲಜ್ಞಾನದ ಬಲದಿಂದ ಸ್ವಾಮೀಜಿಯವರು ಈ ಚುನಾವಣೆಯ ನಂತರ ದೇಶದ ಪ್ರಧಾನಿಯಾಗುವುದು ಮಹಿಳೆಯೇ ಎಂದಿದ್ದರು. ತೃತೀಯ ರಂಗ ಉತ್ತಮ ಸಾಧನೆ ಮಾಡಲಿದೆ ಎಂದಿದ್ದರು. ಪ್ರಧಾನಿ ಆಯ್ಕೆ ಸಮಯದಲ್ಲಿ ಆಗುವ ಗಲಾಟೆಯಿಂದ ಒಂದು ಬಣ ಪ್ರಮುಖ ಪಕ್ಷದಿಂದ ಸಿಡಿದು ಹೋಗಲಿದೆ ಎಂದಿದ್ದರು. ತಮ್ಮ ಭವಿಷ್ಯವಾಣಿಯನ್ನು ಬೆಂಬಲಿಸುವುದಕ್ಕೆ ಮುಂಬಯಿಯ ಮೇಲೆ ಆಕ್ರಮಣ ನಡೆಯುವುದನ್ನು ನಾವು ಮೊದಲೇ ನುಡಿದಿದ್ದೆವು ಎಂದು ನೆನಪಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಥಾನ ಹೆಚ್ಚಿಸಿಕೊಳ್ಳುತ್ತವೆ ಎಂದಿದ್ದರು. ಚುನಾವಣೆಯ ನಂತರ ಯಡಿಯೂರಪ್ಪನವರ ಅಧಿಕಾರಕ್ಕೆ ಕುತ್ತು ಬರಲಿದೆ ಎಂದೂ ತಿಳಿಸಿದ್ದರು.   ಅಲ್ಲಿ ಇಲ್ಲಿ ಕೆಲವು ಅಪಸವ್ಯಗಳನ್ನು ಹೊರತು ಪಡಿಸಿದರೆ ಸ್ವಾಮೀಜಿಯವರ ಭವಿಷ್ಯವಾಣಿ ಶೇ ನೂರರಷ್ಟು ಸತ್ಯವಾಗಿದೆ. 

ಸ್ವಾಮೀಜಿಯವರ ಈ ಸಾಧನೆಗೆ, ದಿವ್ಯ ಶಕ್ತಿಗೆ ತಲೆಬಾಗಿರುವ ವೈಜ್ಞಾನಿಕ ಜಗತ್ತು ಇವತ್ತು ಮಧ್ಯ ರಾತ್ರಿ ಹನ್ನೆರಡು ಗಂಟೆಯಿಂದಲೇ ತಮ್ಮೆಲ್ಲಾ ಕೆಲಸಗಳನ್ನು ನಿಲ್ಲಿಸಿ ಸ್ವಾಮೀಜಿಯ ಪದತಲದಲ್ಲಿ ನೆಲೆಯೂರುವ ಯೋಜನೆ ಹಾಕಿಕೊಂಡಿದ್ದಾರೆ. ಭೂಕಂಪನ ಮುನ್ಸೂಚನೆ, ಚಂಡಮಾರುತ, ಸುನಾಮಿಗಳ ಮುನ್ನೆಚ್ಚರಿಕೆ, ರೇಡಾರ್ ನಿರ್ವಹಣೆ, ಶೇರು ಮಾರುಕಟ್ಟೆಯ ನಿರ್ವಹಣೆ ಮಾಡಬೇಕಾದ ತಜ್ಞರೆಲ್ಲ ತಮ್ಮ ಕೆಲಸಗಳನ್ನು ಸ್ವಾಮೀಜಿಯವರ ಕೈಗೆ ನೀಡಿ ಕಾಲಿಗೆ ಬೀಳಲು ಏಕಸಮ್ಮತವಾಗಿ ನಿರ್ಧರಿಸಿದ್ದಾರೆ.

ಈ ನಡುವೆ  ಸಾಮ್ರಾಟರು ಸ್ವಾಮೀಜಿಯವರನ್ನು ವೈಯಕ್ತಿಕವಾಗಿ ಭೇಟಿಯಾಗಿ ತಮ್ಮ ಅಭಿನಂದನೆಗಳನ್ನು ಸಲ್ಲಿಸಿ, ಈ ವರದಿ ಪ್ರಕಟಣೆಗಾಗಿ ಅಲ್ಪ ಮೊತ್ತದ ಚೆಕ್ ಒಂದನ್ನು ಪಡೆದುಕೊಂಡು ಅದು ಕ್ಲಿಯರ್ ಆಗುವುದೋ ಇಲ್ಲ ಬೌನ್ಸ್ ಆಗುವುದೋ ಎಂದು ಭವಿಷ್ಯವಾಣಿಯನ್ನು ಕೇಳಿಕೊಂಡು ಬಂದು ಕೂತಿದ್ದಾರೆ.

38 Responses to this post.

  1. Posted by sarva on June 4, 2009 at 2:27 pm

    ಸ್ವಾಮೀಜಿಯವರ ಈ ಸಾಧನೆಗೆ, ದಿವ್ಯ ಶಕ್ತಿಗೆ ತಲೆಬಾಗಿರುವ ವೈಜ್ಞಾನಿಕ ಜಗತ್ತು ಇವತ್ತು ಮಧ್ಯ ರಾತ್ರಿ ಹನ್ನೆರಡು ಗಂಟೆಯಿಂದಲೇ ತಮ್ಮೆಲ್ಲಾ ಕೆಲಸಗಳನ್ನು ನಿಲ್ಲಿಸಿ ಸ್ವಾಮೀಜಿಯ ಪದತಲದಲ್ಲಿ ನೆಲೆಯೂರುವ ಯೋಜನೆ ಹಾಕಿಕೊಂಡಿದ್ದಾರೆ. ಭೂಕಂಪನ ಮುನ್ಸೂಚನೆ, ಚಂಡಮಾರುತ, ಸುನಾಮಿಗಳ ಮುನ್ನೆಚ್ಚರಿಕೆ, ರೇಡಾರ್ ನಿರ್ವಹಣೆ, ಶೇರು ಮಾರುಕಟ್ಟೆಯ ನಿರ್ವಹಣೆ ಮಾಡಬೇಕಾದ ತಜ್ಞರೆಲ್ಲ ತಮ್ಮ ಕೆಲಸಗಳನ್ನು ಸ್ವಾಮೀಜಿಯವರ ಕೈಗೆ ನೀಡಿ ಕಾಲಿಗೆ ಬೀಳಲು ಏಕಸಮ್ಮತವಾಗಿ ನಿರ್ಧರಿಸಿದ್ದಾರೆ.

    Reply

  2. Posted by R.TEJASHWINI on July 9, 2009 at 2:26 pm

    R.TEJASHWINI
    DOT: 6/JAN/1986
    TIME: 10:50PM
    BANGALORE-60

    PLEASE SEND THE BHAVISH FOR ME I WILL VERY SAFARING IN MY LIFE

    Reply

    • Posted by Nage samrat on July 15, 2009 at 11:43 am

      ನಿಮ್ಮ ಭವಿಷ್ಯ ಇಂತಿದೆ: (ಸಮಯಾಭಾವದ ಕಾರಣ ಕನ್ನಡದಲ್ಲಿ ಬರೆಯಲಾಗಿಲ್ಲ)

      You have a need for other people to like and admire you, and yet you tend to be critical of yourself. While you have some personality weaknesses you are generally able to compensate for them. You have considerable unused capacity that you have not turned to your advantage. Disciplined and self-controlled on the outside, you tend to be worrisome and insecure on the inside. At times you have serious doubts as to whether you have made the right decision or done the right thing. You prefer a certain amount of change and variety and become dissatisfied when hemmed in by restrictions and limitations. You also pride yourself as an independent thinker; and do not accept others’ statements without satisfactory proof. But you have found it unwise to be too frank in revealing yourself to others. At times you are extroverted, affable, and sociable, while at other times you are introverted, wary, and reserved. Some of your aspirations tend to be rather unrealistic.

      ಫೀಸನ್ನು ನಮ್ಮ ಬಳಿ ಅನಂತರ ವಿಚಾರಿಸತಕ್ಕದ್ದು.

      Reply

    • Posted by THEJESH.M 20/5/1989 10:10AM on July 29, 2009 at 9:03 am

      PLEASE SEND MY BHAVISH.Idont know my future realy confused.please send in kannada. please

      Reply

      • Posted by Nage samrat on July 31, 2009 at 2:57 pm

        ನಿಮ್ ಭವಿಷ್ಯ ನಿಮ್ಮ ಕೈಲೇ ಇದೆ – ಇದು ನಮ್ಮ ಮಾತು.

    • Posted by Anonymous on December 1, 2009 at 3:58 pm

      enu yochane madbedi hella holledhe aguthe

      Reply

  3. Posted by CHICK NARASIMHAMURTHY.K on October 14, 2009 at 2:31 pm

    i want now my futher life famally, and my house

    Reply

  4. Posted by R.Tejashwini on October 20, 2009 at 2:01 pm

    My date of birth is 6/jan/1986
    iam married i have 2kids one for girl she is 7years old and anthoer is boy he is 3years old, my husband name is Rajesh my marrege date of birth is 31/5/2002, i want now my futher life family, and my house

    pelace replay the answer for me in kannada place , place i will be waiting for this.

    place swamiji

    Reply

  5. ಸ್ವಾಮೀಜಿ,

    ನಂದೂ ಭವಿಷ್ಯ ಹೇಳ್ಬಿಡಿ…. ಡೇಟ್ ಆಫ್ ಬರ್ತ್, ಹುಟ್ಟಿದ ಸ್ಥಳ, ಜಾತಕ, ರಾಹು ಕೇತು ಅಡ್ರೆಸ್ಸು, ಎಲ್ಲಾ ನಿಮ್ಮ ದಿವ್ಯ ಜ್ಞಾನಕ್ಕೆ ತಿಳಿಯದ ವಿಷಯವಲ್ಲ.

    ನಂದು ಭವಿಷ್ಯ ಹೇಳಿ ನೋಡಾಣ.

    Reply

    • Posted by Nage samrat on October 23, 2009 at 9:08 pm

      ಇನ್ನೂ ತೆರೆದಿಲ್ಲದ ನಿಮ್ಮ ಇ-ಮೇಲ್ ವಿಳಾಸಕ್ಕೆ ಹಾಗೂ ಡಿಲಿಟ್ ಮಾಡಿದ ನಿಮ್ಮ ಮೊಬೈಲ್ ನಂಬರಿಗೆ ನಿಮ್ಮ ಭವಿಷ್ಯವನ್ನು ಕಳಿಸಿಕೊಡಲಾಗಿದೆ.

      - ನಗೆ ಸಾಮ್ರಾಟ್

      Reply

    • Posted by Vani on November 15, 2009 at 5:02 pm

      Tell me About my Future

      Reply

  6. Guruji i want my futher life

    Reply

  7. My date of birth is 20/jan/1980
    iam unmarried i have i want now my futher life family, and my house

    Reply

  8. Posted by YOGANANDA on November 7, 2009 at 3:56 am

    SWMIJI NIM BAVISHYA NANGU HELI NANU WAIT MADUTENE

    Reply

  9. my date of birth is 20/4/1977. how is my future life

    Reply

  10. my date of birth is 20/4/1977

    Reply

  11. Posted by Dayananda on November 14, 2009 at 12:09 pm

    Please send me my future astrology.

    Reply

  12. Posted by m vasanth kumar on November 21, 2009 at 10:08 am

    Please send my bhavishya for the 2010 pls pls pls ….. i’m waiting for ur kind reply

    Reply

  13. i want to know my future and bhavishya of the year 2010 please send me reply

    Reply

  14. please i want to me my future

    Reply

  15. Posted by savitha g t on November 28, 2009 at 9:03 am

    please give me a my Bhavishaya. i am waiting for your Reply Plz plz plz plz plz
    i want my Feature life.

    Reply

  16. Posted by manjunatha a on December 2, 2009 at 11:40 am

    what is my future life & i will try to governament job’s on banking sector , i will sucssess on this field , please ans me

    Reply

  17. ಸಾಮ್ರಾಟರೇ ಇದೇನು…. ಸೋಮಯಾಜಿಯವರನ್ನೇ ಭವಿಷ್ಯದ ಫೀಲ್ಡಿನಲ್ಲಿ ಮಾಜಿ ಮಾಡುವಷ್ಟು ಖ್ಯಾತರಾಗಿಬಿಟ್ಟಿರಿ?!
    ಭವಿಷ್ಯ ಕೇಳಲು ಅಭಿಮಾನಿಗಳು ನಿಮ್ಮನ್ನು ಮುತ್ತಿಕ್ಕು(!)ತ್ತಿದ್ದಾರೆ!! ಒಂದಂತೂ ಗ್ಯಾರೆಂಟಿ.. ಇದರಲ್ಲಿ ನಿಮ್ಮ ಭವಿಷ್ಯ ಇರುವ ಹಾಗೆ ಇದೆ..:)

    Reply

  18. Posted by prabha on December 3, 2009 at 3:05 pm

    name : S.prabhavathi
    D.O.B : 13/10/1982
    Time : No idea
    Place : Bangalore
    iam 27 yrs old and i have 7yrs 1girl, tell me abouot my future

    Reply

  19. Posted by vasudeva on December 3, 2009 at 9:01 pm

    about my future &finance how
    date:23-2-79

    Reply

  20. Posted by sowmya on December 5, 2009 at 10:19 am

    na

    Reply

  21. Posted by Surekha on December 5, 2009 at 3:25 pm

    Date of birth 24/06/1978, Saturday, 07:00pm

    Reply

  22. Posted by Surekha on December 5, 2009 at 3:26 pm

    About when is my marriage And my future

    Reply

  23. ನನ್ನ ಭವಿಷ್ಯ ಹೇಗಿದೆ ನನ್ನ ಹುಟ್ಟಿದ ದಿನಾಂಕ:-19-10-2009

    Reply

  24. Posted by deepa on December 9, 2009 at 3:51 pm

    i want to know my future DOB is 16.1.1979 TIME. 02.50 AM about money

    Reply

  25. date 21-7-1985
    tme 11-45 morning
    please tell me about my feature?

    Reply

Respond to this post